alex Certify BIG NEWS: ಬೆಂಗಳೂರು ನಂಬಿ ಪಕ್ಷಕ್ಕೆ ಬಂದಿದ್ದೇವೆ; ದೆಹಲಿ ನಂಬಿ ಅಲ್ಲ ಎಂದ ಬಿ.ಸಿ.ಪಾಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬೆಂಗಳೂರು ನಂಬಿ ಪಕ್ಷಕ್ಕೆ ಬಂದಿದ್ದೇವೆ; ದೆಹಲಿ ನಂಬಿ ಅಲ್ಲ ಎಂದ ಬಿ.ಸಿ.ಪಾಟೀಲ್

ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬೆನ್ನಲ್ಲೇ ವಲಸಿಗ ಸಚಿವರಿಗೆ ಸಚಿವ ಸ್ಥಾನ ಉಳಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಚಿವ ಬಿ.ಸಿ.ಪಾಟೀಲ್, ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲೇ ಹೊಸ ಸಿಎಂ ಆಯ್ಕೆಯಾಗಿದೆ. ಸಿಎಂ ಬದಲಾಗಿದ್ದಾರೆ ಹೊರತು ಬೇರೆ ಏನೂ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು 17 ಜನರೂ ಖುಷಿಯಾಗಿದ್ದೇವೆ. ನಮಗೆ ಯಾವುದೇ ಆತಂಕವಿಲ್ಲ. ಬೆಂಗಳೂರು ನಂಬಿ ಬಿಜೆಪಿಗೆ ಬಂದಿದ್ದೇವೆ ಹೊರತು ದೆಹಲಿ ನಂಬಿ ಅಲ್ಲ. ವರಿಷ್ಠರ ಮಾರ್ಗದರ್ಶನದಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದರು.

ಜೀವನದಲ್ಲಿ ರಾಹು ಪ್ರಭಾವವನ್ನು ತೋರಿಸುತ್ತೆ ಈ ಸಂಕೇತ

ಇನ್ನು ಸಂಪುಟ ಸೇರ್ಪಡೆ ಬಗ್ಗೆ ನೂತನ ಸಿಎಂ ಹಾಗೂ ಬಿ.ಎಸ್.ಯಡಿಯೂರಪ್ಪನವರೆ ನಿರ್ಧರಿಸುತ್ತಾರೆ. ರಾಜೀನಾಮೆ ಕೊಡುವಾಗಲೂ ಖುಷಿಯಿಂದಲೇ ಕೊಟ್ಟಿದ್ದೇವೆ. ನಾವು ದೆಹಲಿಗಂತು ಹೋಗಿ ಲಾಬಿ ನಡೆಸಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...