alex Certify BIG NEWS: ಬಿಜೆಪಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಅಂದುಕೊಂಡಿದೆ: ಅಧಿಕಾರ ಸಿಕ್ಕಾಗ ಈ ರೀತಿ ಕೃತ್ಯ ಸರಿಯಲ್ಲ; HDK ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಅಂದುಕೊಂಡಿದೆ: ಅಧಿಕಾರ ಸಿಕ್ಕಾಗ ಈ ರೀತಿ ಕೃತ್ಯ ಸರಿಯಲ್ಲ; HDK ಆಕ್ರೋಶ

ಕೋಲಾರ: ವೋಟರ್ ಐಡಿ ಅಕ್ರಮ ನಡೆಸಿರುವ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್, ಜೆಡಿಎಸ್ ಬೂತ್ ಗಳಲ್ಲಿ ಮತದಾರ ಹೆಸರು ಡಿಲಿಟ್ ಮಾಡಿದ್ದಾರೆ. ಇದೆಲ್ಲವೂ ಬಿಜೆಪಿಯ ಕುತಂತ್ರ. ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅಧಿಕಾರ ಸಿಕ್ಕಾಗ ಪ್ರಾಮಾಣಿಕವಾಗಿ ಕೆಲಸ ಮಾಡದೇ ಈ ರೀತಿ ಕೃತ್ಯ ನಡೆಸುತ್ತಿದ್ದಾರೆ. ಬಿಜೆಪಿ ಕುತಂತ್ರ ರಾಜಕಾರಣದಿಂದ ಗೆಲ್ಲಬಹುದು ಅಂದುಕೊಂಡಿದೆ. ಚಿಲುಮೆ ಸಂಸ್ಥೆ ಮೇಲೆ ದಾಳಿ ವೇಳೆ ಮಂತ್ರಿಯ ಖಾಲಿ ಚೆಕ್ ಯಾಕಿತ್ತು ? ಈ ಮಂತ್ರಿಯನ್ನು ಇಟ್ಟುಕೊಂಡು ಇವರು ಯಾವ ತನಿಖೆ ನಡೆಸುತ್ತಿದ್ದಾರೆ ? ತನಿಖೆ ಮೇಲೆ ವಿಶ್ವಾಸವಿಲ್ಲ. ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಂತೆ ಕೆಲಸ ಮಾಡಬಾರದು. ಜನರಲ್ಲಿ ವಿಶ್ವಾಸ ಮೂಡಬೇಕು ಎಂದರೆ ಮೊದಲು ಆ ಸಚಿವರನ್ನು ವಜಾ ಮಾಡಲಿ ಎಂದು ಆಗ್ರಹಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...