alex Certify BIG NEWS: ಬಿಜೆಪಿಯವರು ಮೊದಲು ಕಣ್ಣೀರು ಹಾಕುತ್ತಿರುವ ಈಶ್ವರಪ್ಪನವರನ್ನು ಸಂತೈಸಲಿ; ಕೇಸರಿ ನಾಯಕರಿಗೆ ಡಿ.ಕೆ.ಶಿವಕುಮಾರ್ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಬಿಜೆಪಿಯವರು ಮೊದಲು ಕಣ್ಣೀರು ಹಾಕುತ್ತಿರುವ ಈಶ್ವರಪ್ಪನವರನ್ನು ಸಂತೈಸಲಿ; ಕೇಸರಿ ನಾಯಕರಿಗೆ ಡಿ.ಕೆ.ಶಿವಕುಮಾರ್ ತಿರುಗೇಟು

ಮೈಸೂರು: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ಟೀಕಿಸುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಪಕ್ಷದ ಬಗ್ಗೆ ಅವರಿಗೆ ಯಾಕೆ ಅಷ್ಟು ಕಾಳಜಿ. ಮೊದಲು ಬಿಜೆಪಿಯವರು ತಮ್ಮ ಪಕ್ಷದ ಜೋಡೋ ಮಾಡಿಕೊಳ್ಳಲಿ ಎಂದಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ಬಿಜೆಪಿ ನಾಯಕರು ಮೊದಲು ತಮ್ಮ ಪಕ್ಷದವರನ್ನು ನೋಡಿಕೊಳ್ಳಲಿ. ನಾವು ವಿಪಕ್ಷದಲ್ಲಿರುವವರು ಯಾವತ್ತೂ ಒಗ್ಗಟ್ಟಾಗಿಯೇ ಇರುತ್ತೇವೆ. ನಮ್ಮ ಪಕ್ಷದ ಬಗ್ಗೆ ಕಾಳಜಿ ಮಾಡುವುದನ್ನು ಬಿಟ್ಟು ಮೊದಲು ಅವರ ಪಕ್ಷದ ನಾಯಕರನ್ನು ಜೋಡೋ ಮಾಡಿಕೊಳ್ಳಲಿ ಎಂದು ಹೇಳಿದರು.

ಬಿಜೆಪಿಯವರು ತಮ್ಮಲ್ಲಿರುವ ಪ್ರಮಾದ ಸರಿಮಾಡಿಕೊಳ್ಳಲಿ. ಪಾಪ ಈಶ್ವರಪ್ಪ ಕಣ್ಣೀರು ಸುರಿಸುತ್ತಿದ್ದಾರೆ. ಮೊದಲು ಅವರನ್ನು ಸಂತೈಸಲಿ. ಬಿ ರಿಪೋರ್ಟ್ ಬೇರೆ ಹಾಕಿಸಿದ್ದಾರೆ. ಯಾವ ತನಿಖೆಯನ್ನೂ ಮಾಡುತ್ತಿಲ್ಲ. ಇಂಧನ ಸಚಿವ ಸುನೀಲ್ ಕುಮಾರ್ ವಿದ್ಯುತ್ ಬಗ್ಗೆ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಬಗ್ಗೆ ಬಿಜೆಪಿ ಎಷ್ಟೇ ವ್ಯಂಗ್ಯವಾಡಿದರೂ ಪಾದಯಾತ್ರೆ ಮೇಲೆ ಯಾವ ಪರಿಣಾಮವೂ ಬೀರಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...