alex Certify BIG NEWS: ಪ್ರತಾಪ್ ಸಿಂಹ ಅವರೇ ಎಷ್ಟು ದಿನ ಅಂತ ಸುಳ್ಳು ಹೇಳುತ್ತೀರಿ….?; ಟಾಂಗ್ ಕೊಟ್ಟ ಹೆಚ್.ವಿಶ್ವನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪ್ರತಾಪ್ ಸಿಂಹ ಅವರೇ ಎಷ್ಟು ದಿನ ಅಂತ ಸುಳ್ಳು ಹೇಳುತ್ತೀರಿ….?; ಟಾಂಗ್ ಕೊಟ್ಟ ಹೆಚ್.ವಿಶ್ವನಾಥ್

ಮೈಸೂರು: ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ಸಾಧನೆ ಸಂಸದ ಪ್ರತಾಪ್ ಸಿಂಹ ಅವರದ್ದಲ್ಲ, ಇದು ಹಿಂದಿನ ಸಂಸದ, ಯುಪಿಎ ಸರ್ಕಾರ, ಸಿದ್ದರಾಮಯ್ಯ ಅವರ ಸಾಧನೆ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ಬೆಂಗಳೂರು-ಮೈಸೂರು 6 ಪಥ ರಸ್ತೆ ನಿರ್ಮಾಣ ಯೋಜನೆ ತಾನೇ ತಂದೆ ಎಂದು ಹೇಳುವುದು ಸರಿಯಲ್ಲ. ಮಂಡ್ಯ ಸಂಸದೆ ಸುಮಲತಾ ಹೇಳಿರುವುದು ಸರಿಯಾಗಿದೆ. ಪ್ರತಾಪ್ ಸಿಂಹ ಅವರೇ ಎಷ್ಟು ದಿನ ಅಂತ ಸುಳ್ಳು ಹೇಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಜಲವಿವಾದ ಬಗೆಹರಿಸಲು ಜೆಡಿಎಸ್ ಹೋರಾಟ: ಕಚ್ಚಾಡುತ್ತಿರುವ ಕಾಂಗ್ರೆಸ್, ಬಿಜೆಪಿ ನಾಯಕರಿಗೆ ಗೌಡರ ಬುದ್ಧಿ ಮಾತು

ನಾನು, ಆರ್.ಧ್ರುವನಾರಾಯಣ, ರಮ್ಯಾ ಸಂಸದರಾಗಿದ್ದೆವು. ಆ ಸಮಯದಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಯಾಗಿದೆ. ಈಗ ನಿವೇನಾದರೂ ಹೊಸದಾಗಿ ಯೋಜನೆ ತಂದಿದ್ದರೆ ನನಗೆ ಹೇಳಿ ಅದರ ಬಗ್ಗೆ ಮಾತನಾಡೋಣ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.

ಅಲ್ಲದೇ ಉಂಡುವಾಡಿ ಕುಡಿಯುವ ನೀರು ಯೋಜನೆ ಶಾಸಕ ಜಿ.ಟಿ.ದೇವೇಗೌಡ ಅವರ ಸಾಧನೆ ಅಲ್ಲ. ಈ ಯೋಜನೆ ತಂದಿದ್ದು ನಾನು. ಈ ಯೋಜನೆ ತಂದಾಗ ಜಿಟಿಡಿಯವರೇ ತಾವೆಲ್ಲಿದ್ರಿ ಎಂದು ಕೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...