alex Certify BIG NEWS: ಪೆಟ್ರೋಲ್ ಬಾಂಬ್ ಹಾಕಲು ಪ್ಲಾನ್; ಆಡಿಯೋ ವೈರಲ್; ನಗರ ಸಭೆ ಸದಸ್ಯ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪೆಟ್ರೋಲ್ ಬಾಂಬ್ ಹಾಕಲು ಪ್ಲಾನ್; ಆಡಿಯೋ ವೈರಲ್; ನಗರ ಸಭೆ ಸದಸ್ಯ ಅರೆಸ್ಟ್

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ 50 ಕಡೆಗಳಲ್ಲಿ ಪೆಟ್ರೋಲ್ ಬಾಂಬ್ ಹಾಕಬೇಕು ಎಂದು ಹೇಳಿದ್ದ ನಗರಸಭೆ ಜೆಡಿಎಸ್ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ.

ಮುಸ್ತಫಾ ಬಂಧಿತ ಆರೋಪಿ. ಮುಸ್ತಫಾ ಮಡಿಕೇರಿಯಲ್ಲಿ ಪೆಟ್ರೋಲ್ ಬಾಂಬ್ ಹಾಕುವ ಬಗ್ಗೆ ರಾಜಾರೋಷವಾಗಿ ಚರ್ಚೆ ನಡೆಸುತ್ತಿದ್ದ ಆಡಿಯೋ ವೈರಲ್ ಆಗಿದೆ. ಶೇಷಪ್ಪ ರೈ ಎಂಬುವವರ ಮೊಬೈಲ್ ನಲ್ಲಿ ಈ ಆಡೀಯೋ ರೆಕಾರ್ಡ್ ಆಗಿದೆ. ಬೆಟ್ಟಗೇರಿ ಅಬ್ದುಲ್ಲಾ ಜೊತೆ ಮಾತನಾಡುತ್ತಾ ಮುಸ್ತಪ್ಪಾ ಮಡಿಕೇರಿ ನಗರಕ್ಕೆ ಪೆಟ್ರೋಲ್ ಬಾಂಬ್ ಹಾಕಬೇಕು. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಗಲಭೆ ನಡೆಸಿದರೆ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಪ್ಲಾನ್ ಮಾಡಿದ್ದ.

ಅಲ್ಲದೇ 50 ಜನರ ತಂಡ ಕಟ್ಟಿ ತರಬೇತಿ ಕೊಡಬೇಕು. ಎಲ್ಲರೂ ಸೇರಿ 50ರಿಂದ 1 ಲಕ್ಷ ಹಣ ಹಾಕಿ ಈ ಕೃತ್ಯವೆಸಗಬೇಕು. ಇಡೀ ಮಡಿಕೇರಿ ಹೊತ್ತಿ ಉರಿಯಲಿ. ಅವರೂ ಸಾಯಲಿ, ನಾವೂ ಸಾಯೋಣ. ಆಗ ಅವರಿಗೆ ಬುದ್ಧಿ ಬರುತ್ತದೆ ಎಂದು ಹೇಳಿದ್ದಾನೆ. ಇದಕ್ಕೆ ಅಬ್ದುಲ್ಲಾ ಎಂಬಾತ ಮಡಿಕೇರಿ ಮಾತ್ರವಲ್ಲ ಎಲ್ಲಾ ಕಡೆ ಬಾಂಬ್ ಹಾಕಬೇಕು ಎಂದಿದ್ದಾನೆ.

ಇದೀಗ ಈ ಆಡಿಯೋ ವೈರಲ್ ಆಗಿದ್ದು, ಮುಸ್ತಫಾ ಹಾಗೂ ಅಬ್ದುಲ್ ಪ್ಲಾನ್ ಗೆ ರಾಜ್ಯದ ಜನತೆ ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ಸಂಬಂಧ ಆರೋಪಿ ನಗರಸಭೆ ಸದಸ್ಯ ಮುಸ್ತಫಾನನ್ನು ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...