alex Certify BIG NEWS: ಪಿಯು ವಿದ್ಯಾರ್ಥಿ ನಾಪತ್ತೆ; ಅಪಹರಣ ಶಂಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಯು ವಿದ್ಯಾರ್ಥಿ ನಾಪತ್ತೆ; ಅಪಹರಣ ಶಂಕೆ

ಕಲಬುರ್ಗಿ: ಪಿಯು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಕಲಬುರ್ಗಿ ಜಿಲ್ಲೆ ಮಾತಾ ಮಾಣಿಕೇಶ್ವರಿ ಕಾಲೋನಿಯಲ್ಲಿ ನಡೆದಿದೆ.

ಸಂತೋಷ್ ಚೌವ್ಹಾಣ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಸೈಕಲ್ ವಿಚಾರವಾಗಿ ಸ್ನೇಹಿತರ ನಡುವೆ ಜಗಳ ನಡೆದಿದ್ದು, ಘಟನೆ ಬಳಿಕ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ವಿದ್ಯಾರ್ಥಿಯನ್ನು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ.

BIG NEWS: ಡಿಕೆಶಿ ತೋಳ್ಬಲ ತೋರಿಸಲು ಹೋಗಿದ್ರಾ….? ಫಲಿತಾಂಶದವರೆಗೆ ಕಾಯುವ ತಾಳ್ಮೆಯೂ ಇಲ್ಲ; ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಜೋಶಿ ವಾಗ್ದಾಳಿ

ಸಂತೋಷ್ ಕಾಲೇಜಿಗೆ ಹೋಗಲೆಂದು ಸ್ನೇಹಿತನೊಬ್ಬನಿಂದ 3 ಸಾವಿರ ರೂಪಾಯಿಗೆ ಸೈಕಲ್ ಖರೀದಿಸಿದ್ದ. ಆದರೆ ಕೆಲವರು ಇದು ತಮ್ಮ ಸೈಕಲ್, ಕಳ್ಳತನ ಮಾಡಿದ್ದೀಯಾ ಎಂದು ಸಂತೋಷ್ ವಿರುದ್ಧ ಆರೋಪ ಮಾಡಿದ್ದರು. ಇದೇ ವಿಚಾರವಾಗಿ ಮಾರ್ಚ್ 11ರಂದು ಗಲಾಟೆ ನಡೆದಿತ್ತು. ಗಲಾಟೆ ಬಳಿಕ ಸಂತೋಷ್ ನಾಪತ್ತೆಯಾಗಿದ್ದು, ಆತನ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದೆ.

ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಸಂತೋಷ್ ಪೋಷಕರು ಮಗ ನಾಪತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...