alex Certify BIG NEWS: ಪಿಎಸ್ಐ ಅಕ್ರಮ ಪ್ರಕರಣ; 15 ಲಕ್ಷ ಹಣ ವಾಪಸ್ ನೀಡಿದ ಶಾಸಕ ದಡೇಸುಗೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಸ್ಐ ಅಕ್ರಮ ಪ್ರಕರಣ; 15 ಲಕ್ಷ ಹಣ ವಾಪಸ್ ನೀಡಿದ ಶಾಸಕ ದಡೇಸುಗೂರ್

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಆಡಿಯೋ ವೈರಲ್ ವಿಚಾರವಾಗಿ ಇದೀಗ ಮತ್ತೊಂದು ಸುದ್ದಿ ಬಹಿರಂಗವಾಗಿದ್ದು, ಪಡೆದಿದ್ದ ಹಣವನ್ನು ಶಾಸಕರು ವಾಪಸ್ ನೀಡಿದ್ದಾರೆ.

ನೌಕರಿ ಕೊಡಿಸುವುದಾಗಿ ಹೇಳಿ ಪರಸಪ್ಪ ಎಂಬುವವರ ಮಗನಿಂದ ಕನಕಗಿರಿ ಶಾಸಕ ಬಸವರಾಜ್ ದಡೇಸುಗೂರು 15 ಲಕ್ಷ ಹಣ ಪಡೆದಿದ್ದಾರೆ ಎಂಬ ಆಡಿಯೋ ವೈರಲ್ ಆಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು ತಾವು ಪಡೆದಿದ್ದ ಹಣವನ್ನು ಜಿಲ್ಲಾಧ್ಯಕ್ಷ ಡೊಡ್ಡಗೌಡ ಸಮ್ಮುಖದಲ್ಲಿ ವಾಪಸ್ ನೀಡಿದ್ದು, ಪರಸಪ್ಪ ಎಂಬುವವರಿಂದ ಬಲವಂತವಾಗಿ ಸುದ್ದಿಗೋಷ್ಠಿಯನ್ನೂ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ ರಾತ್ರಿ ಶಾಸಕರು ಹಣ ವಾಪಸ್ ಕೊಟ್ಟಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸುವಂತೆ ಹೇಳಿದ್ದಾರೆ. ಶಾಸಕರೊಂದಿಗೆ ಸಂಭಾಷಣೆ ನಡೆಸುತ್ತಿದ್ದ ಆಡಿಯೋಗೂ ನನಗೂ ಸಂಬಂಧವಿಲ್ಲ. ಬೇರೆ ವ್ಯವಹಾರದ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದೆ ಹೊರತು ಮಗನ ಪಿಎಸ್ಐ ಹುದ್ದೆ ನೇಮಕಾತಿಗಾಗಿ ಅಲ್ಲ. ನಾನು ಶಾಸಕರಿಗೆ ಯಾವುದೇ ಹಣವನ್ನು ಕೊಟ್ಟಿಲ್ಲ ಎಂದು ಒಲ್ಲದ ಮನಸ್ಸಿನಿಂದ ಪರಸಪ್ಪ ಹೇಳಿದ್ದಾನೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...