alex Certify BIG NEWS: ನೆಹರು ಕುಟುಂಬ ಮಾತ್ರಾನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು?; ಎಂ ಎಲ್ ಸಿ ರವಿ ಕುಮಾರ್ ಪ್ರಶ್ನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೆಹರು ಕುಟುಂಬ ಮಾತ್ರಾನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು?; ಎಂ ಎಲ್ ಸಿ ರವಿ ಕುಮಾರ್ ಪ್ರಶ್ನೆ

ಬೆಳಗಾವಿ: ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರವಾಗಿ ಕಾಂಗ್ರೆಸ್ ಧರಣಿಗೆ ಕಿಡಿಕಾರಿರುವ ಬಿಜೆಪಿ ಎಂಎಲ್ ಸಿ ರವಿ ಕುಮಾರ್, ನೆಹರು ಕುಟುಂಬ ಮಾತ್ರಾನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಕುಮಾರ್, ನೆಹರು ಕುಟುಂಬ ಮಾತ್ರಾನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು? ವಿ.ಡಿ.ಸಾವರ್ಕರ್ ಕೂಡ ದೇಶ ಕಂಡ ಅಪ್ರತಿಮ ಹೋರಾಟಗಾರ. ಆಜಾದ್, ಭಗತ್ ಸಿಂಗ್ ಗೆ ದೇಶಭಕ್ತಿ ತುಂಬಿದ್ದು ವಿ.ಡಿ.ಸಾವರ್ಕರ್ ಎಂದು ತಿಳಿಸಿದ್ದಾರೆ.

ಸಾವರ್ಕರ್ ಭಾವಚಿತ್ರವನ್ನು ಸಾರ್ವಜನಿಕರು ಬೇಡ ಅಂತಿದ್ದಾರಾ? ಎಲ್ಲಾ ಸಿದ್ಧಾಂತದವರೂ ಸಾವರ್ಕರ್ ಅವರನ್ನು ಒಪ್ಪಿಕೊಂಡಿದ್ದಾರೆ. ಸಾವರ್ಕರ್, ಅಂಬೆಡ್ಕರ್ ಫೊಟೋ ಹಾಕಲು ಚರ್ಚಿಸಬೇಕಾ? ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚಿಸಬೇಕಾ? ಈ ಭಾಗದ ಜನರ ಸಮಸ್ಯೆ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...