alex Certify BIG NEWS: ನಿಮ್ಮ ಸಮಸ್ಯೆಗೆ ಸಿಬ್ಬಂದಿಯನ್ನು ಉಪವಾಸ ದೂಡಬೇಡಿ; ಮುರುಘಾ ಮಠ, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ ಪಾವತಿ ವಿಚಾರ; ಮೆಮೊ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಿಮ್ಮ ಸಮಸ್ಯೆಗೆ ಸಿಬ್ಬಂದಿಯನ್ನು ಉಪವಾಸ ದೂಡಬೇಡಿ; ಮುರುಘಾ ಮಠ, ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳ ವೇತನ ಪಾವತಿ ವಿಚಾರ; ಮೆಮೊ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ

ಪದವಿ ಕೋರ್ಸ್‌ ನಲ್ಲಿ ಕನ್ನಡ ಕಡ್ಡಾಯ ಆದೇಶ: ಸರ್ಕಾರ ವಿರುದ್ಧ ಹೈಕೋರ್ಟ್ ನಲ್ಲಿ ಅರ್ಜಿ- Kannada Prabha

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಶ್ರೀಗಳಿಗೆ ಚೆಕ್ ಹಾಗೂ ಇತರ ದಾಖಲೆಗಳಿಗೆ ಸಹಿ ಹಾಕಲು ಅವಕಾಶ ನೀಡುವಂತೆ ಕೋರಿ ಮುರುಘಾ ಶ್ರೀಗಳ ಪರ ವಕೀಲ ಸಂದೀಪ್ ಪಾಟೀಲ್ ಹೈಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

ಮುರುಘಾ ಶ್ರೀಗಳು ಚೆಕ್ ಗಳಿಗೆ ಸಹಿ ಹಾಕದಿದ್ದರೆ ಮಠದ ಸಿಬ್ಬಂದಿ ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ವೇತನ ಪಾವತಿ ಹಾಗೂ ಇತರ ಖರ್ಚುಗಳಿಗೆ ಸಮಸ್ಯೆಯಾಗಲಿದೆ. ಸಿಬ್ಬಂದಿಗಳಿಗೆ ವೇತನ ನೀಡಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಾದ ಆಲಿಸಿದ ಹೈಕೋರ್ಟ್ ನಿಮ್ಮ ಸಮಸ್ಯೆಗಳಿಗೆ ಸಿಬ್ಬಂದಿಗಳನ್ನು ಉಪವಾಸಕ್ಕೆ ದೂಡಬೇಡಿ. ಮುರುಘಾ ಶ್ರೀಗಳ ಬಂಧನಕ್ಕೆ ಮೊದಲು ಹೇಗೆ ಸಂಬಳ, ಖರ್ಚುವೆಚ್ಚ ನಿಭಾಯಿಸಲಾಗುತ್ತಿತ್ತು ಎಂಬ ಬಗ್ಗೆ ವಿವರವಾದ ಮಾಹಿತಿ ಇರುವ ಮೆಮೊ ಸಲ್ಲಿಸಿ ಎಂದು ವಕೀಲರಿಗೆ ಸೂಚಿಸಿದೆ.

ಈ ಹಿಂದೆ ಮುರುಘಾ ಶ್ರೀಗಳಿಗೆ ಚೆಕ್ ಹಾಗೂ ದಾಖಲೆಗಳಿಗೆ ಸಹಿ ಹಾಕಲು ಅನುಮತಿ ನೀಡಬೇಕು ಎಂದು ಚಿತ್ರದುರ್ಗ ಸೆಷನ್ ಕೋರ್ಟ್ ಗೆ ವಕೀಲರು ಸಲ್ಲಿಸಿದ್ದ ಮನವಿಗೆ ಕೋರ್ಟ್ ಸೆ.20ವರೆಗೆ ಅನುಮತಿ ನಿರಾಕರಿಸಿತ್ತು

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...