alex Certify BIG NEWS: ನಾನು ಸೂಕ್ಷ್ಮವಾಗಿ ಹೇಳಿದ್ದೇನೆ; ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ; ಸಿದ್ದರಾಮಯ್ಯಗೆ ಮತ್ತೆ ಸವಾಲು ಹಾಕಿದ ಸಿ.ಟಿ. ರವಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾನು ಸೂಕ್ಷ್ಮವಾಗಿ ಹೇಳಿದ್ದೇನೆ; ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ; ಸಿದ್ದರಾಮಯ್ಯಗೆ ಮತ್ತೆ ಸವಾಲು ಹಾಕಿದ ಸಿ.ಟಿ. ರವಿ

ಬೆಂಗಳೂರು: ಕಾಂಗ್ರೆಸ್ ನಾಯಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ಏನು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳಾ ? ನನ್ನನ್ನೇ ಲೂಟಿ ರವಿ ಎಂದರೆ ಸಿದ್ದರಾಮಯ್ಯ ಅವರನ್ನು ಪೆದ್ದ ಅನ್ನಬೇಕಾ ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕ ಸಿ.ಟಿ. ರವಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಿ.ಟಿ. ರವಿ, ಸಮಾಜವಾದಿಗಳ ಮಜವಾದಿತನ ನೋಡುತ್ತಿದ್ದೇನೆ. ಸೆಂಟ್ ಹಾಕಿಕೊಂಡು ವಾಸನೆ ಮುಚ್ಚಿ ಹಾಕಲು ಆಗಲ್ಲ. ನಾನು ಸೂಕ್ಷ್ಮವಾಗಿ ಹೇಳುವುದನ್ನು ಹೇಳಿದ್ದೇನೆ. ಉತ್ತರ ಕೊಡುವವರು ಏನು ಕೊಡ್ತಾರೆ ನೋಡೋಣ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯನವರನ್ನು ಮೈಸೂರಿನಲ್ಲಿ ಕಚ್ಚೆಹರಕ ಎಂದು ಕರೆಯುತ್ತಾರೆ. ನಾನು ಹೇಳುತ್ತಿರುವುದಲ್ಲ ಜನ ಕರೆಯುತ್ತಾರೆ ಎಂದು ಹೇಳಿದ್ದೇನೆ. ಅವರು ನನ್ನನ್ನು ಲೂಟಿ ರವಿ ಎಂದು ಚಿಕ್ಕಮಗಳೂರಿನಲ್ಲಿ ಜನ ಕರೆಯುತ್ತಾರೆ ಎಂದು ಹೇಳಿರುವುದಕ್ಕೆ ಹೇಳುತ್ತಿದ್ದೇನೆ. ನಾನು ಲೂಟಿ ಮಾಡಿದ್ದರೆ ಜನ ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಕೆಂಪಣ್ಣ ಆಯೋಗ ರಚಿಸಿದ ಉದ್ದೇಶವೇ ಬೇರೆ. ಟಿಎ, ಡಿಎ ತೆಗೆದುಕೊಳ್ಳಲು ಆಯೋಗ ರಚಿಸಿರಲಿಲ್ಲ. ನನ್ನನ್ನು ಲೂಟಿ ಎನ್ನುವುದಾದರೆ ಇವರನ್ನು ಏನು ಕರೆಯಬೇಕು ? ನನ್ನನ್ನು ಕೇಳಿದಂತೆ ಇತರರಿಗೂ ಅಷ್ಟೇ ಗಟ್ಟಿಯಾಗಿ ಪ್ರಶ್ನೆಗಳನ್ನು ಕೇಳಿ ಎಂದು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...