alex Certify BIG NEWS: ನಾನು ಮಾಡಿದ ಕೆಲಸವನ್ನು ಮಾಡಿಲ್ಲ ಅಂದ್ರೆ ಸುಮ್ಮನಿರಲ್ಲ; ಕ್ರೆಡಿಟ್ ಗಾಗಿ ನಾನು ಕ್ಷೇತ್ರದ ಕೆಲಸ ಮಾಡ್ತಿಲ್ಲ; ಮತ್ತೆ ಗುಡುಗಿದ ಸಂಸದೆ ಸುಮಲತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾನು ಮಾಡಿದ ಕೆಲಸವನ್ನು ಮಾಡಿಲ್ಲ ಅಂದ್ರೆ ಸುಮ್ಮನಿರಲ್ಲ; ಕ್ರೆಡಿಟ್ ಗಾಗಿ ನಾನು ಕ್ಷೇತ್ರದ ಕೆಲಸ ಮಾಡ್ತಿಲ್ಲ; ಮತ್ತೆ ಗುಡುಗಿದ ಸಂಸದೆ ಸುಮಲತಾ

ಮೈಸೂರು: ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿದ ಕೆಲಸಗಳಿಗೆ ಬೇರೆಯವರು ಕ್ರೆಡಿಟ್ ಪಡೆಯಲು ಮುಂದೆ ಬರುತ್ತಿದ್ದಾರೆ ಎಂದು ಸಂಸದೆ ಸುಮಲತಾ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸುಮಲತಾ, ನಾನು ಮಾಡಿದ ಕೆಲಸಗಳನ್ನು ಅಲ್ಲ ಎಂದರೆ ಸುಮ್ಮನಿರಲು ಸಾಧ್ಯವಿಲ್ಲ. ಕ್ರೆಡಿಟ್ ಗಾಗಿ ನಾನು ಏನನ್ನೂ ಮಾಡಿಲ್ಲ. ಶಿಂಷಾ ಸೇತುವೆ ವಿಚಾರವಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಸೇತುವೆ ವಿಚಾರವಾಗಿ ನಿತಿನ್ ಗಡ್ಕರಿಗೆ ಪತ್ರ ಬರೆದಿದ್ದೇನೆ. ಯಾರು ಬೇಕಾದರೂ ಸಚಿವರಿಗೆ ಪತ್ರ ಬರೆಯಬಹುದು. ಮಾಜಿ ಪ್ರಧಾನಿ, ಬೇರೆಯವರೂ ಪತ್ರ ಬರೆದಿರಬಹುದು. ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

WAR BREAKING: ಯುದ್ಧ ಟ್ಯಾಂಕರ್ ನಿಂದ ಏಕಕಾಲದಲ್ಲಿ ಹಾರಿದ 40 ಮಿಸೈಲ್; ಖಾರ್ಕಿವ್ ನಲ್ಲಿ ಮೂರು ಮಕ್ಕಳು ಸೇರಿ 7 ಜನ ಸಾವು; ಬಂಕರ್ ನಲ್ಲಿ ಆಶ್ರಯ ಪಡೆಯಲು ಸೂಚನೆ

ನಾನು ಮಾಡಿದ ಕೆಲಸಕ್ಕೆ ಮಾಡಿಲ್ಲ ಅಂದ್ರೆ ಸುಮ್ಮನಿರಲ್ಲ. ನನ್ನನ್ನು ಟಾರ್ಗೆಟ್ ಮಾಡುವುದು ಮೊದಲಿನಿಂದಲೂ ನಡೆದಿದೆ. ನಾನು ಕೆಲಸ ಮಾಡುತ್ತೇನೆ ಹಾಗಾಗಿ ಜನರು ನನ್ನ ಪರವಾಗಿದ್ದಾರೆ ಎಂಬ ಭಯ ಬೇರೆ ರಾಜಕಾರಣಿಗಳಲ್ಲಿ ಆರಂಭವಾಗಿದೆ ಹಾಗಾಗಿ ನನ್ನ ಕೆಲಸಕ್ಕೆ ಬೇರೆಯವರು ಕ್ರೆಡಿಟ್ ಪಡೆಯಲು ಮುಂದಾಗಿದ್ದಾರೆ ಎಂದು ಗುಡುಗಿದರು.

ಇದೇ ವೇಳೆ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎಂದ ಸುಮಲತಾ, ಮುಂದಿನ ಚುನಾವಣೆಯನ್ನು ಪಕ್ಷದ ಚಿಹ್ನೆಯಡಿ ಎದುರಿಸುವ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಆಗ ಅದರ ಬಗ್ಗೆ ಯೋಚನೆ ಮಾಡುತ್ತೇನೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...