alex Certify BIG NEWS: ನನ್ನ ಕಷ್ಟ ನೋಡಿ ಕನಿಕರ ಇರುವ ಕಾರ್ಯಕರ್ತರು ಒಂದಾಗಿ; ಭಾವುಕರಾಗಿ ಮಾತನಾಡಿದ HDK | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನನ್ನ ಕಷ್ಟ ನೋಡಿ ಕನಿಕರ ಇರುವ ಕಾರ್ಯಕರ್ತರು ಒಂದಾಗಿ; ಭಾವುಕರಾಗಿ ಮಾತನಾಡಿದ HDK

ತುಮಕೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಡವರ ರಕ್ತ ಹೀರುತ್ತಿದೆ. ಈ ಸರ್ಕಾರ ಬರಲು ಕಾಂಗ್ರೆಸ್ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ ಎಂದು ಗುಡುಗಿದರು.

ಒಂದು ಸಾರಿ ಜೆಡಿಎಸ್ ಗೆ ಮತಕೊಟ್ಟು ಅಧಿಕಾರಕ್ಕೆ ತನ್ನಿ. ಸಾರಿಗೆ ನೌಕರರ ವೇತನ, ಪಿಂಚಣಿ ಜಾರಿಗೆ ತರಲು ನಾವು ಸಿದ್ಧ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರುವ ಕೆಲಸ ಮಾಡಿ ಎಂದು ಕರೆ ನೀಡಿದರು.

ಆರೋಗ್ಯ ಸಮಸ್ಯೆ ಇದ್ದರೂ ಕೂಡ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನನ್ನ ಕಷ್ಟ ನೋಡಿ ಕನಿಕರ ಇರುವ ಕಾರ್ಯಕರ್ತರು ಒಂದಾಗಿ. ಭಿನ್ನಾಭಿಪ್ರಾಯಗಳನ್ನು ಮರೆತು ಈ ಭಾಗದಲ್ಲಿ ಗೋವಿಂದರಾಜು ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...