alex Certify BIG NEWS: ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿಡಿಮದ್ದು ಸ್ಫೋಟ; 12 ಜನರಿಗೆ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿಡಿಮದ್ದು ಸ್ಫೋಟ; 12 ಜನರಿಗೆ ಗಾಯ

ಕಲಬುರ್ಗಿ: ದೇವಿಯ ಮೂರ್ತಿ ಪ್ರತಿಷ್ಠಾಪನೆ ವೇಳೆ ಸಿಡಿ ಮದ್ದು ಸ್ಫೋಟಗೊಂಡು 12 ಭಕ್ತರು ಗಾಯಗೊಂಡಿರುವ ಘಟನೆ ಕಲಬುರ್ಗಿ ಜಿಲ್ಲೆಯ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ.

ಮರಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ವೇಳೆ ಈ ಅವಘಡ ಸಂಭವಿಸಿದ್ದು, ಸಿಡಿಮದ್ದು ಸಿಡಿಸಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದರು. ಆದರೆ ಸಿಡಿಮದ್ದಿಗೆ ಏಕಾಏಕಿ ಬೆಂಕಿ ಕಿಡಿ ತಾಗಿದ್ದರಿಂದ ಸ್ಫೋಟಗೊಂಡಿದ್ದು, ಪರಿಣಾಮ ಸ್ಥಳದಲ್ಲಿದ್ದ 12 ಜನರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಅಯ್ಯಪ್ಪ, ಸೈಬಣ್ಣಾ ರಾವೂತಪ್ಪ, ಖಾಜಾಸಾಬ್ ನದೀಮ್, ಬಸವರಾಜ್ ಸಂಗಪ್ಪ, ಬಸವರಾಹ್ ಹಣಮಂತ, ಮೆಹಬೂಬ್ ಪಟೇಲ್, ಮಹೇಶ್, ವಾಸುದೇವ, ಸಾಯಬಣ್ಣ ನಾಗಪ್ಪ, ಕಾಶಿನಾಥ, ನಿಂಗಣ್ಣ, ಮಹಂತೇಶ್ , ಶರಣಪ್ಪ ಸೇರಿದಂತೆ 12 ಜನರು ಗಾಯಗೊಡಿದ್ದಾರೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...