alex Certify BIG NEWS: ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ; ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ; ಬಂಡಾಯ ಶಾಸಕರಿಗೆ ಆದಿತ್ಯ ಠಾಕ್ರೆ ಸವಾಲು

ಮುಂಬೈ: ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು, ಮನವೊಲಿಕೆಗೂ ಬಗ್ಗದ ಬಂಡಾಯ ಶಾಸಕರ ವಿರುದ್ಧ ಕಿಡಿ ಕಾರಿರುವ ಶಿವಸೇನೆ ನಾಯಕ ಆದಿತ್ಯ ಠಾಕ್ರೆ, ನಿಮಗೆ ತಾಕತ್ತಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಸವಾಲು ಹಾಕಿದ್ದಾರೆ.

ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆದಿತ್ಯ ಠಾಕ್ರೆ, ನಿವೆಲ್ಲರೂ ಶಿವಸೇನೆಯಿಂದ ಶಾಸಕರಾಗಿ ಆಯ್ಕೆಯಾಗಿದ್ದೀರಿ. ತಾಕತ್ತಿದ್ದರೆ ರಾಜಿನಾಮೆ ಕೊಟ್ಟು, ಮತ್ತೊಮ್ಮೆ ಚುನಾವಣೆ ಎದುರಿಸಿ ಗೆದ್ದು ತೋರಿಸಿ ಎಂದು ಹೇಳಿದ್ದಾರೆ.

ನಿಮ್ಮನ್ನು ಗೆಲ್ಲಿಸಿದ್ದು ಮಹಾರಾಷ್ಟ್ರದ ಜನತೆ. ಆದರೆ ನೀವು ಹೋಗಿ ಪ್ರವಾಹ ಪೀಡಿತ ರಾಜ್ಯದಲ್ಲಿ ಕುಳಿತಿದ್ದೀರಿ. ಪ್ರತಿ ಶಾಸಕರ ದಿನದ ಖರ್ಚು ಅಂದಾಜು 8 ಲಕ್ಷ ರೂಪಾಯಿ ತಲುಪುತ್ತಿದೆ. ನಿಮಗೆ ಕಾಳಜಿ ಇದ್ದರೆ ನೆರೆಪೀಡಿತರನ್ನಾದರೂ ರಕ್ಷಿಸಿ. ಅದನ್ನು ಬಿಟ್ಟು ರೆಸಾರ್ಟ್ ನಲ್ಲಿ ಕುಳಿತು ಖರ್ಚು ಮಾಡಿ ಕಾಲಹರಣ ಮಾಡುತ್ತಿರುವುದು ಯಾಕೆ? ಎಂದು ವಾಗ್ದಾಳಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...