alex Certify BIG NEWS: ಡಿಕೆಶಿ ಹೇಳಿಕೆ ಚುನಾವಣಾ ಓಲೈಕೆ ತಂತ್ರ; ಕಾಂಗ್ರೆಸ್ ನವರು ಉಗ್ರರ ಪರವೋ? ದೇಶದ ಪರವೋ ಸ್ಪಷ್ಟಪಡಿಸಲಿ; ಕಿಡಿಕಾರಿದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಕೆಶಿ ಹೇಳಿಕೆ ಚುನಾವಣಾ ಓಲೈಕೆ ತಂತ್ರ; ಕಾಂಗ್ರೆಸ್ ನವರು ಉಗ್ರರ ಪರವೋ? ದೇಶದ ಪರವೋ ಸ್ಪಷ್ಟಪಡಿಸಲಿ; ಕಿಡಿಕಾರಿದ ಸಿಎಂ

ಬೆಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಚುನಾವಣೆಗಾಗಿ ಓಲೈಕೆಯ ತಂತ್ರ. ಹೀಗೆ ಹೇಳಿಕೆ ನೀಡಿದರೆ ಅಲ್ಪಸಂಖ್ಯಾತರ ಮತ ಬರುತ್ತೆ ಅಂತ ತಂತ್ರ ಮಾಡಿದ್ದಾರೆ. ಕಾಂಗ್ರೆಸ್ ನವರು ಉಗ್ರರ ಪರವೋ? ದೇಶದ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಿಡಿಕಾರಿದರು.

ಒಂದು ಸಮುದಾಯದ ಓಲೈಕೆಗಾಗಿ ಡಿಕೆಶಿ ಹೇಳಿಕೆ ಕೊಡುವುದು ಸರಿಯಲ್ಲ. ಹೀಗೆ ಮಾತನಾಡುವುದು ದೇಶ ಭಕ್ತನ ಕೆಲಸ ಅಲ್ಲ. ಜನ ಜಾಗೃತರಾಗಿದ್ದಾರೆ. ಇಂತಹ ತಂತ್ರಗಾರಿಕೆಗಳು ನಡೆಯುವುದಿಲ್ಲ. ಡಿಕೆಶಿ ಹೇಳಿಕೆ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಲಿ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...