alex Certify BIG NEWS: ಟೈಲರ್ ಹತ್ಯೆ ಪ್ರಕರಣ; ಕೊಲೆ ಆರೋಪಿ ಮುಸ್ಲಿಂ ಮೂಲಭೂತವಾದಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು; ಮಾಜಿ ಸಚಿವ ಈಶ್ವರಪ್ಪ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಟೈಲರ್ ಹತ್ಯೆ ಪ್ರಕರಣ; ಕೊಲೆ ಆರೋಪಿ ಮುಸ್ಲಿಂ ಮೂಲಭೂತವಾದಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕು; ಮಾಜಿ ಸಚಿವ ಈಶ್ವರಪ್ಪ ಆಗ್ರಹ

ಶಿವಮೊಗ್ಗ: ನೂಪುರ್ ಶರ್ಮಾಗೆ ಬೆಂಬಲ ನೀಡಿದ್ದ ಉದಯಪುರ ಟೈಲರ್ ಕನ್ಹಯ್ಯ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಕೊಲೆಗೆಡುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ, ಇದು ಹಿಂದೂಸ್ಥಾನ. ಸಾವಿರಾರು ಜನ ಹಿಂದೂ ಯುವಕರು ಬಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ ಕೆಲ ಮುಸ್ಲಿಂ ಮೂಲಭೂತವಾದಿಗಳು ಸಂಕುಚಿತ ಮನೋಭಾವವನ್ನು ಹೊಂದಿ ಹಿಂದೂಗಳ ಹತ್ಯೆ ನಡೆಸುತ್ತಿದ್ದಾರೆ. ಟೈಲರ್ ಕನ್ಹಯ್ಯನನ್ನು ಕೊಲೆಗೈದ ಆರೋಪಿಗಳು ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿ ವಿಡಿಯೋ ರವಾನಿಸಿದ್ದಾರೆ. ಇಂತಹ ರಾಷ್ಟ್ರದ್ರೋಹಿಗಳನ್ನು ಮರಣದಂಡನೆಗೆ ಗುರಿಪಡಿಸಬೇಕು ಎಂದರು.

ಈ ದೇಶದಲ್ಲಿ ಮುಸ್ಲಿಂರಿಗೆ ವಿಶೇಷ ಕಾನೂನು ರೂಪಿಸಬೇಕು. ಇಡೀ ಪ್ರಪಂಚ ಮೆಚ್ಚಿರುವ ಪ್ರಧಾನಿ ಮೋದಿಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಈ ದೇಶದಲ್ಲಿ ಬದುಕುತ್ತೇವೆ ಎಂಬ ಭಂಡ ಧೈರ್ಯದಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ ಅಂದರೆ ಅವರ ಮನಸ್ಥಿತಿ ಎಲ್ಲಿಯವರೆಗೆ ತಲುಪಿದೆ ಎಂದು ಕಿಡಿಕಾರಿದರು.

ಪೈಗಂಬರ್ ಬಗ್ಗೆ ನೂಪುರ್ ಶರ್ಮಾ ಹೇಳಿದ ಒಂದು ಹೇಳಿಕೆಯನ್ನು ಪ್ರಪಂಚದಾದ್ಯಂತ ಮುಸ್ಲಿಂರು ಖಂಡಿಸಿದರು. ನೂಪುರ್ ಗೆ ಬೆಂಬಲಿಸಿದ್ದಕ್ಕೆ ಈಗ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇದನ್ನು ಮುಸ್ಲಿಂ ಸಮುದಾಯದವರೂ ಕೂಡ ಖಂಡಿಸಬೇಕು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...