alex Certify BIG NEWS: ಚಿತ್ರದುರ್ಗ ಮುರುಘಾ ಮಠದ ಆವರಣದಲ್ಲೀಗ ನೀರವ ಮೌನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಿತ್ರದುರ್ಗ ಮುರುಘಾ ಮಠದ ಆವರಣದಲ್ಲೀಗ ನೀರವ ಮೌನ

ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದು ಅವರನ್ನು ಈಗ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ತಮ್ಮ ಬಂಧನಕ್ಕೆ ಪೊಲೀಸರು ಬಂದ ವೇಳೆ ಕಾವಿ ಕಳಚಿ ಬಿಳಿ ಬಟ್ಟೆ ಧರಿಸಿದ ಶಿವಮೂರ್ತಿ ಶರಣರು ಪೊಲೀಸ್ ಜೀಪ್ ಏರಿದ್ದಾರೆ. ಅವರ ಬಂಧನದ ವಿಷಯ ತಿಳಿಯುತ್ತಿದ್ದಂತೆ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸ್ಥಳೀಯರು ಜಮಾಯಿಸಿದ್ದರು.

ಶಿವಮೂರ್ತಿ ಶರಣರನ್ನು ಈಗ ಚಿತ್ರದುರ್ಗ ಕಾರಾಗೃಹದಲ್ಲಿ ಇರಿಸಲಾಗಿದ್ದು, ಇದರ ಮಧ್ಯೆ ಮುರುಘಾ ಮಠದ ಆವರಣದಲ್ಲಿ ನೀರವ ಮೌನ ಆವರಿಸಿದೆ. ಮಠದಲ್ಲಿರುವ ಭಕ್ತರು ಶ್ರೀಗಳಿಗೆ ಜಾಮೀನು ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...