alex Certify BIG NEWS: ಚಂದ್ರಶೇಖರ ಗುರೂಜಿ ಹತ್ಯೆ ಹಿಂದಿದೆಯಾ ಹೆಣ್ಣಿನ ನೆರಳು ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಂದ್ರಶೇಖರ ಗುರೂಜಿ ಹತ್ಯೆ ಹಿಂದಿದೆಯಾ ಹೆಣ್ಣಿನ ನೆರಳು ?

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಗೋಕುಲ್‌ ರೋಡ್ ಪೊಲೀಸರು ಈಗಾಗಲೇ ವನಜಾಕ್ಷಿ ಎಂಬಾಕೆಯನ್ನು ವಶಕ್ಕೆ ಪಡೆದಿದ್ದು, ಈಕೆ ಗುರೂಜಿಯ ಆಪ್ತ ಮಹಾಂತೇಶ್‌ ಪತ್ನಿ ಎಂದು ತಿಳಿದುಬಂದಿದೆ.

ಸರಳ ವಾಸ್ತು ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದ ಚಂದ್ರಶೇಖರ ಗುರೂಜಿ, ಬೇನಾಮಿ ಆಸ್ತಿಯನ್ನು ವನಜಾಕ್ಷಿ ಹೆಸರಿನಲ್ಲಿ ಮಾಡಿದ್ದರೆನ್ನಲಾಗಿದ್ದು, ಅದನ್ನು ಹಿಂದಿರುಗಿಸುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

2017 ರಿಂದ 2019 ರ ವರೆಗೆ ವನಜಾಕ್ಷಿ ಚಂದ್ರಶೇಖರ ಗುರೂಜಿ ಬಳಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದಳೆನ್ನಲಾಗಿದ್ದು, ಆಕೆಯ ಹೆಸರಿನಲ್ಲಿದ್ದು ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದ ಗುರೂಜಿ ಈ ಬಗ್ಗೆ ತಾಕೀತು ಮಾಡಿದ್ದರೆನ್ನಲಾಗಿದೆ.

ಈ ವಿಚಾರಕ್ಕೆ ಪದೇ ಪದೇ ಚಂದ್ರಶೇಖರ ಗುರೂಜಿ ಹಾಗೂ ಮಹಾಂತೇಶ್‌ – ವನಜಾಕ್ಷಿ ದಂಪತಿ ನಡುವೆ ಕಲಹ ನಡೆಯುತ್ತಿದ್ದು, ಇದರ ಪರಿಣಾಮವಾಗಿಯೇ ಈ ಕೊಲೆ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರ ತನಿಖೆ ಬಳಿಕವೇ ಅಂತಿಮ ಸತ್ಯ ಬಹಿರಂಗವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...