alex Certify BIG NEWS: ‘ಗೋಲ್ಡನ್ ಅವರ್’ ಒಳಗೆ ಅಪಘಾತ ಸಂತ್ರಸ್ತರಿಗೆ ನೆರವಾಗುವವರಿಗೆ ನೀಡುವ ನಗದು ಬಹುಮಾನ ಯೋಜನೆ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಗೋಲ್ಡನ್ ಅವರ್’ ಒಳಗೆ ಅಪಘಾತ ಸಂತ್ರಸ್ತರಿಗೆ ನೆರವಾಗುವವರಿಗೆ ನೀಡುವ ನಗದು ಬಹುಮಾನ ಯೋಜನೆ ವಿಸ್ತರಣೆ

ರಸ್ತೆ ಅಪಘಾತಗಳು ಸಂಭವಿಸಿದ ವೇಳೆ ಅವರುಗಳಿಗೆ ನೆರವಾಗಲು ಬಹುತೇಕರು ಹಿಂದೇಟು ಹಾಕುತ್ತಾರೆ. ಇದರ ಜೊತೆಗೆ ನೆರವಾಗುವ ಬದಲು ವಿಡಿಯೋ ಮಾಡುತ್ತಾ ನಿಲ್ಲುವ ಹಲವು ಅಮಾನವೀಯ ಘಟನೆಗಳು ಸಹ ನಡೆದಿದೆ. ಅಪಘಾತಗಳ ಸಂದರ್ಭದಲ್ಲಿ ‘ಗೋಲ್ಡನ್ ಅವರ್’ ಒಳಗೆ ಸಂತ್ರಸ್ತರಿಗೆ ಚಿಕಿತ್ಸೆ ದೊರೆತರೆ ಬಹುತೇಕರ ಪ್ರಾಣ ಉಳಿಯುತ್ತದೆ ಎಂಬುದು ಹಲವು ಘಟನೆಗಳಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಯೋಜನೆಯೊಂದನ್ನು ಆರಂಭಿಸಿದ್ದು, ಅಪಘಾತ ಸಂಭವಿಸಿದ ವೇಳೆ ತುರ್ತು ಅವಧಿಯೊಳಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಲು ನೆರವಾಗುವ ಉತ್ತಮ ನಾಗರಿಕರಿಗೆ ನಗದು ಬಹುಮಾನ ನೀಡಲಾಗುತ್ತದೆ. ಇದೀಗ ಈ ಯೋಜನೆಯನ್ನು 2026 ರ ಮಾರ್ಚ್ 31 ರವರೆಗೆ ಮುಂದುವರಿಸಲಾಗಿದೆ.

ಸಮಯ ಪ್ರಜ್ಞೆ ಮೆರೆದು ಅಪಘಾತ ಸಂತ್ರಸ್ತರಿಗೆ ನೆರವಾಗುವವರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 5,000 ನಗದು ಬಹುಮಾನ ಹಾಗೂ ಪ್ರಶಂಸಾ ಪತ್ರ ನೀಡುತ್ತಿದ್ದು, ರಾಷ್ಟ್ರಮಟ್ಟದಲ್ಲಿ 10 ಮಂದಿಯನ್ನು ಪರಿಗಣಿಸಲಾಗುತ್ತದೆ. ಇವರುಗಳಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಿದ್ದು, ಹೆಚ್ಚಿನ ಮಾಹಿತಿಗೆ https://transport.py.gov.in ವೆಬ್ ಸೈಟ್ ವೀಕ್ಷಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...