alex Certify BIG NEWS: ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿವಿಐಪಿಗಳಿಗಿಲ್ಲ ವಿಶೇಷ ಆಸನ ವ್ಯವಸ್ಥೆ; ಜನಸಾಮಾನ್ಯರು, ರಿಕ್ಷಾ ಚಾಲಕರಿಗೆ ಆದ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿವಿಐಪಿಗಳಿಗಿಲ್ಲ ವಿಶೇಷ ಆಸನ ವ್ಯವಸ್ಥೆ; ಜನಸಾಮಾನ್ಯರು, ರಿಕ್ಷಾ ಚಾಲಕರಿಗೆ ಆದ್ಯತೆ

ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ದಿನಗಣನೆ ಶುರುವಾಗಿದೆ. ಪರೇಡ್ ವೀಕ್ಷಣೆಗೆ ಇಡೀ ದೇಶವೇ ಕಾತರದಿಂದಿರುತ್ತದೆ. ಸಾಮಾನ್ಯವಾಗಿ ಪರೇಡ್‌ ವೇಳೆ ಮುಂದಿನ ಸೀಟಿನಲ್ಲಿ ವಿವಿಐಪಿಗಳು ಆಸೀನರಾಗಿರುತ್ತಾರೆ. ಆದ್ರೆ ಈ ಬಾರಿಯ ಆಚರಣೆ ವಿಶಿಷ್ಟವಾಗಿದೆ.

ರಿಕ್ಷಾ ಚಾಲಕರು, ತರಕಾರಿ ವ್ಯಾಪಾರಿಗಳಿಂದ ಹಿಡಿದು ಬೀದಿ ಬದಿಯ ಸಣ್ಣ ವ್ಯಾಪಾರಿಗಳಿಗೂ ಈ ಬಾರಿಯ ಪರೇಡ್‌ ವೀಕ್ಷಣೆಗೆ ಆಹ್ವಾನವಿದೆ. ಮೂಲಗಳ ಪ್ರಕಾರ ಶ್ರಮಜೀವಿಗಳು, ಅವರ ಕುಟುಂಬಗಳು, ಕರ್ತವ್ಯ ಪಥದ ನಿರ್ವಹಣಾ ಕೆಲಸಗಾರರು ಮತ್ತು ಸಮುದಾಯದ ಇತರ ಸದಸ್ಯರಾದ ರಿಕ್ಷಾ ಚಾಲಕರು, ಸಣ್ಣ ದಿನಸಿ ವ್ಯಾಪಾರಿಗಳು ಮತ್ತು ತರಕಾರಿ ಮಾರಾಟಗಾರರು ಮುಖ್ಯ ವೇದಿಕೆಯ ಮುಂದೆ ಕುಳಿತುಕೊಳ್ಳಲಿದ್ದಾರೆ.

ಈ ವರ್ಷದ ಎಲ್ಲಾ ಗಣರಾಜ್ಯೋತ್ಸವ ಕಾರ್ಯಕ್ರಮಗಳ ಆಚರಣೆಗಳ ಥೀಮ್ “ಸಾಮಾನ್ಯ ಜನರ ಭಾಗವಹಿಸುವಿಕೆ”ಯಾಗಿದೆ. ಈ ವರ್ಷ ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈಜಿಪ್ಟ್‌ನ 120 ಸದಸ್ಯರ ಕವಾಯತು ತಂಡವು ಮೆರವಣಿಗೆಯಲ್ಲಿ ಭಾಗವಹಿಸುತ್ತದೆ.

ಸೆಪ್ಟೆಂಬರ್ 2022 ರಲ್ಲಿ ನವೀಕರಿಸಿದ ಸೆಂಟ್ರಲ್ ವಿಸ್ಟಾ ಅವೆನ್ಯೂ ಉದ್ಘಾಟನೆಯ ಸಂದರ್ಭದಲ್ಲಿ ಈ ಹಿಂದೆ ರಾಜ್‌ಪಥ್ ಎಂದು ಕರೆಯಲ್ಪಡುವ ಸ್ಥಳವನ್ನು ಕರ್ತವ್ಯ ಪಥ್ ಎಂದು ಮರುನಾಮಕರಣ ಮಾಡಿದ ನಂತರ ಇದು ಮೊದಲ ಗಣರಾಜ್ಯೋತ್ಸವದ ಪರೇಡ್ ಆಗಿದೆ. ಪರೇಡ್‌ನ ಆಸನಗಳ ಸಂಖ್ಯೆಯನ್ನು 45,000ಕ್ಕೆ ಇಳಿಸಲಾಗಿದೆ, ಇದರಲ್ಲಿ 32,000 ಆಸನಗಳಿವೆ. ಬೀಟಿಂಗ್ ರಿಟ್ರೀಟ್ ಈವೆಂಟ್‌ಗಾಗಿ ಒಟ್ಟು ಸೀಟುಗಳಲ್ಲಿ ಶೇ.10ರಷ್ಟು ಸಾರ್ವಜನಿಕರಿಗೆ ಆನ್‌ಲೈನ್ ಮಾರಾಟಕ್ಕೆ ಲಭ್ಯವಿದೆ.

ಬುಡಕಟ್ಟು ವ್ಯವಹಾರಗಳು-ರಕ್ಷಣಾ ಸಚಿವಾಲಯಗಳ ಕಾರ್ಯಕ್ರಮಗಳು ಮತ್ತು ಕೆಂಪು ಕೋಟೆಯಲ್ಲಿ ಭಾರತ್ ಪರ್ವ್ ಸಮಯದಲ್ಲಿ ವಿವಿಧ ರಾಜ್ಯಗಳ ಕಲಾ ಪ್ರಕಾರಗಳು ಮತ್ತು ಆಹಾರ ಪದಾರ್ಥಗಳ ಪ್ರದರ್ಶನಗಳು ಸಹ ಇರುತ್ತವೆ. ಫ್ಲೈಪಾಸ್ಟ್, 18 ಹೆಲಿಕಾಪ್ಟರ್‌ಗಳು, 8 ಟ್ರಾನ್ಸ್‌ಪೋರ್ಟರ್ ಏರ್‌ಕ್ರಾಫ್ಟ್‌ಗಳು ಮತ್ತು 23 ಫೈಟರ್‌ಗಳನ್ನು ಒಳಗೊಂಡಿರುತ್ತದೆ. ಕಳೆದ ಕೆಲವು ವರ್ಷಗಳಿಂದ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸರ್ಕಾರಿ ಸಮಾರಂಭಗಳು ಮತ್ತು ಕಾರ್ಯಕ್ರಮಗಳಲ್ಲಿ ಸಾಮಾನ್ಯ ಜನರ ಪ್ರಾತಿನಿಧ್ಯವನ್ನು ಹೆಚ್ಚಿಸಲು ವಿಶೇಷ ಒತ್ತು ನೀಡಿದೆ.

ಕಳೆದ ವರ್ಷದ ಗಣರಾಜ್ಯೋತ್ಸವದ ಪರೇಡ್‌ನಲ್ಲಿಯೂ ಸಹ, ಆಟೋರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು, ನೈರ್ಮಲ್ಯ ಕಾರ್ಮಿಕರಿಗೆ ರಾಷ್ಟ್ರೀಯ ಮಹಾ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನವನ್ನು ನೀಡಲಾಗಿತ್ತು. ಕಳೆದ ವರ್ಷ ಜಾನಪದ ಕಲಾವಿದರು, ಸಮಾಜ ಸೇವಕರು, ಸಂಗೀತಗಾರರು, ಕ್ರೀಡಾಪಟುಗಳು, ಸಮಾಜ ಸೇವೆಯಲ್ಲಿ ತೊಡಗಿರುವವರಿಗೆ ಪದ್ಮ ಪ್ರಶಸ್ತಿ ದೊರೆತಿರುವುದು ಕೂಡ ವಿಶೇಷ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...