alex Certify BIG NEWS: ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ; ಈಗ ಬಸವಣ್ಣನಾಗಿದ್ದೇನೆ ಎಂದ ಯತ್ನಾಳ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ; ಈಗ ಬಸವಣ್ಣನಾಗಿದ್ದೇನೆ ಎಂದ ಯತ್ನಾಳ್

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹಿಂದೆಯೆ ಭವಿಷ್ಯ ನುಡಿದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತು ನಿಜವಾಗಿದ್ದು, ಉತ್ತರ ಕರ್ನಾಟಕ ಮೂಲದ ಲಿಂಗಾಯಿತ ಸಮುದಾಯದ ಬಸವರಾಜ್ ಬೊಮ್ಮಾಯಿ ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್, ಹಿಂದಿನ ಸರ್ಕಾರದಲ್ಲಾದ ತಪ್ಪನ್ನು ಬೊಮ್ಮಾಯಿ ಮಾಡಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಕುಟುಂಬ ರಾಜಕಾರಣಕ್ಕೆ, ಭ್ರಷ್ಟಾಚಾರಕ್ಕೆ ಮಣೆ ಹಾಕಲ್ಲ ಎಂಬ ಸಂದೇಶ ಸಿಎಂ ಬದಲಾವಣೆಯಿಂದ ರವಾನೆಯಾಗಿದೆ. ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೂ ಈ ಬಗ್ಗೆ ಅರಿವಿದೆ. ಹಾಗಾಗಿ ಆಡಳಿತದಲ್ಲಿ ಕುಟುಂಬದ ಹಸ್ತಕ್ಷೇಪ, ಭ್ರಷ್ಟಾಚಾರದಂತಹ ದುರಾಡಳಿತ ನೀಡಲ್ಲ ಎಂಬ ಭರವಸೆಯಿದೆ. ಕಳೆದ ಸರ್ಕಾರದಲ್ಲಿನ ತಪ್ಪುಗಳು ಪುನರಾವರ್ತನೆ ಮಾಡದಂತೆ ಈ ಮೂಲಕ ಎಚ್ಚರಿಸುತ್ತೇನೆ ಎಂದರು.

ʼಸಂತಾನೋತ್ಪತ್ತಿʼ ಸಮಸ್ಯೆಗೆ ಕಾರಣವಾಗ್ತಿದೆ ಈ ರೋಗ

ಕೇಂದ್ರ ನಾಯಕರು ನನಗೆ ಆದೇಶ ನೀಡಿದರೆ ಸಚಿವ ಸ್ಥಾನ ಸ್ವೀಕರಿಸುತ್ತೇನೆ ಹೊರತು ನಾನಾಗಿಯೇ ಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಡಲ್ಲ. ಸಚಿವ ಸ್ಥಾನ ನೀಡದಿದ್ದರೂ ಶಾಸಕನಾಗಿ ಪ್ರಾಮಾಣಿಕನಾಗಿ ಕೆಲಸ ಮುಂದುವರೆಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಗಡ್ಡ ತೆಗೆದು ಸ್ಮಾರ್ಟಾಗಿದ್ದೀರಲ್ಲಾ ಎಂಬ ಸುದ್ದಿಗಾರರ ಪ್ರಶ್ನೆಗೆ ನಾನು ಸ್ಮಾರ್ಟ್ ಆಗಿಯೆ ಇದ್ದೇನೆ. ಗಡ್ಡ ಬಿಟ್ಟು ಶಿವಾಜಿಯಾಗಿದ್ದೆ, ಈಗ ಗಡ್ಡ ತೆಗೆದು ಬಸವಣ್ಣನಾಗಿದ್ದೇನೆ ಎಂದು ಹೇಳಿ ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...