alex Certify BIG NEWS: ಗಡಿ ವಿವಾದ; ಮಹಾರಾಷ್ಟ್ರ ಕೇಸ್ ಗೊತ್ತಾದ ಬಳಿಕ ತೀಕ್ಷ್ಣವಾಗಿ ಉತ್ತರಿಸಿದ್ದೇನೆ ಎಂದ ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಡಿ ವಿವಾದ; ಮಹಾರಾಷ್ಟ್ರ ಕೇಸ್ ಗೊತ್ತಾದ ಬಳಿಕ ತೀಕ್ಷ್ಣವಾಗಿ ಉತ್ತರಿಸಿದ್ದೇನೆ ಎಂದ ಸಿಎಂ

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕುರಿತು ವಿಧಾನಸಭೆಯಲ್ಲಿ ನಿಯಮ 69ರ ಅಡಿ ಚರ್ಚೆ ನಡೆದಿದ್ದು, ಗಡಿ ವಿಚಾರದಲ್ಲಿ ನಾನು ಒಂದೇ ಧ್ವನಿಯಲ್ಲಿ ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ, ಗಡಿ ವಿಚಾರದಲ್ಲಿ ಅತ್ಯಂತ ಜವಾಬ್ದಾರಿಯಿಂದ ಮಾತನಾಡಿದ್ದೇನೆ. ಸ್ವಲ್ಪ ಸಮಸ್ಯೆಯಾದರೂ ಏನಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಹಾರಾಷ್ಟ್ರ ಕೇಸ್ ಗೊತ್ತಾದ ತಕ್ಷಣ ತೀಕ್ಷ್ಣವಾಗಿ ಉತ್ತರಿಸಿದ್ದೆ. ಅಲ್ಲಿನ ಸಚಿವರ ಭೇಟಿ ಬಗ್ಗೆಯೂ ಸೂಕ್ಷ್ಮವಾಗಿ ಉತ್ತರಿಸಿದ್ದೇನೆ. ಆದರೂ ಅವರು ಬರಲು ತವಕಿಸಿದಾಗ ಸಿಎಸ್ ಮೂಲಕ ಹೇಳಿಸಿದ್ದೆ. ನಮ್ಮ ಕಡೆಯಿಂದ ಯಾವುದೇ ತಪ್ಪು ಆಗಿಲ್ಲ ಎಂದರು.

ನಾಳೆ ಗಡಿ ವಿಚಾರವಾಗಿ ಸರ್ಕಾರ ಉತ್ತರ ಕೊಡಲಿದ್ದು, ನಿರ್ಣಯ ಅಂಗಿಕರಿಸಿ ಕೇಂದ್ರಕ್ಕೆ ಕಳುಹಿಸೋಣ ಎಂದು ಹೇಳಿದರು. ಇದಕ್ಕೆ ಧ್ವನಿಗೂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ನಾಳೆ ನಿರ್ಣಯ ತೆಗೆದುಕೊಂಡು ಬನ್ನಿ ಅಂಗೀಕರಿಸಿ ಕಳುಹಿಸೋಣ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...