alex Certify BIG NEWS: ಗಂಧದಗುಡಿಗಾಗಿ ಚಿತ್ರಮಂದಿರಗಳಿಗೆ ಆನೆಯನ್ನೇ ತಂದ ಅಪ್ಪು ಅಭಿಮಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗಂಧದಗುಡಿಗಾಗಿ ಚಿತ್ರಮಂದಿರಗಳಿಗೆ ಆನೆಯನ್ನೇ ತಂದ ಅಪ್ಪು ಅಭಿಮಾನಿಗಳು

ತುಮಕೂರು: ರಾಜ್ಯಾದ್ಯಂತ ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಾಕ್ಷ್ಯಚಿತ್ರ ಗಂಧದಗುಡಿ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.

ಗಂಧದಗುಡಿ ಚಿತ್ರಕ್ಕಾಗಿ ಅಭಿಮಾನಿಗಳು ಥಿಯೇಟರ್ ಗೆ ಆನೆಯನ್ನೇ ಕರೆದುಕೊಂಡು ಬಂಧಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರಿನ ಜೈ ಭಾರತ್ ಚಿತ್ರಮಂದಿರಕ್ಕೆ ಅಪ್ಪು ಅಭಿಮಾನಿಗಳು ಆನೆಯನ್ನು ಕರೆತಂದು ನಿಲ್ಲುಸಿದ್ದು, ಸಿನಿಮಾ ನೋಡಲು ಬಂದ ಅಭಿಮಾನಿಗಳು ಆನೆಯೊಂದಿಗೆ ನಿಂತು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ.

ಇನ್ನೊಂದೆಡೆ ರಾಯಚೂರು ಚಿತ್ರಮಂದಿರದಲ್ಲಿಯೂ ಅಭಿಮಾನಿಗಳು ಆನೆಯನ್ನು ಕರೆತಂದಿದ್ದಾರೆ. ಇನ್ನು ರಾಜ್ಯಾದ್ಯಂತ ಚಿತ್ರಮಂದಿರಗಳ ಎದುರು ಅಪ್ಪು ಅಭಿಮಾನಿಗಳು ಪಟಾಕಿ ಸಿಡಿಸಿ, ಹಾಡು ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...