alex Certify Big News: ಖಾರ್ಕಿವ್​ನಿಂದ ಭಾರತೀಯರ ಸ್ಥಳಾಂತರ, ಇನ್ನು ನಮ್ಮ ಗುರಿ ಏನಿದ್ದರೂ ಸುಮಿ ಎಂದ ಕೇಂದ್ರ ವಿದೇಶಾಂಗ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಖಾರ್ಕಿವ್​ನಿಂದ ಭಾರತೀಯರ ಸ್ಥಳಾಂತರ, ಇನ್ನು ನಮ್ಮ ಗುರಿ ಏನಿದ್ದರೂ ಸುಮಿ ಎಂದ ಕೇಂದ್ರ ವಿದೇಶಾಂಗ ಸಚಿವಾಲಯ

ಉಕ್ರೇನ್​ನಲ್ಲಿರುವ ಭಾರತೀಯರ ಸ್ಥಳಾಂತರ ವಿಚಾರದಲ್ಲಿ ಕೇಂದ್ರ ವಿದೇಶಾಂಗ ಸಚಿವಾಲಯವು ಮಹತ್ವದ ಮಾಹಿತಿಯನ್ನು ನೀಡಿದೆ. ಪಿಸೋಚಿನ್​ ಹಾಗೂ ಖಾರ್ಕಿವ್​ನಲ್ಲಿರುವ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಮುಂದಿನ ಕೆಲವೇ ಗಂಟೆಗಳಲ್ಲಿ ಏರ್​ಲಿಫ್ಟ್​ ಮಾಡಲಿದ್ದೇವೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿದೆ.

ಯುದ್ಧ ಪೀಡಿತ ಸುಮಿಯ ಮೇಲೆ ಮುಖ್ಯ ಗಮನವನ್ನು ನೀಡಿದ್ದೇವೆ. ಈಗಾಗಲೇ ಮೂರು ಬಸ್​ಗಳನ್ನು ಪಿಸೊಚಿನ್​ಗೆ ತಲುಪಿಸಲಾಗಿದೆ. ಕೆಲವೇ ಗಂಟೆಗಳಲ್ಲಿ ಪಶ್ಚಿಮ ಉಕ್ರೇನ್​ಗೆ ತೆರಳಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಪಿಸೋಚಿನ್​ ಹಾಗೂ ಖಾರ್ಕಿವ್​ನಿಂದ ನಾವು ಮುಂದಿನ ಕೆಲವೇ ಗಂಟೆಗಳಲ್ಲಿ ಎಲ್ಲರನ್ನೂ ಸ್ಥಳಾಂತರಿಸುತ್ತಿದ್ದೇವೆ. ಇಲ್ಲಿಯವರೆಗೆ ಎಲ್ಲಾ ಭಾರತೀಯರು ಖಾರ್ಕಿವ್​ನಿಂದ ಹೊರಬಂದಿದ್ದಾರೆಂದು ನನಗೆ ತಿಳಿದಿದೆ. ನಮ್ಮ ಮುಖ್ಯ ಗಮನ ಇದೀಗ ಸುಮಿ ಮೇಲಿದೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಹೇಳಿದ್ದಾರೆ.

ಪೂರ್ವ ಉಕ್ರೇನಿಯನ್​ ನಗರ ಸುಮಿಯಲ್ಲಿ ನೂರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ಇದು ರಷ್ಯಾ ಮತ್ತು ಉಕ್ರೇನಿಯನ್ ಪಡೆಗಳ ನಡುವೆ ತೀವ್ರವಾದ ಹೋರಾಟಕ್ಕೆ ಸಾಕ್ಷಿಯಾಗುತ್ತಿರುವ ಸಂಘರ್ಷದ ವಲಯಗಳಲ್ಲಿ ಒಂದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...