alex Certify BIG NEWS: ಕೌಟುಂಬಿಕ ಕಲಹ; ಮಗು ಸೇರಿ ಮೂವರು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೌಟುಂಬಿಕ ಕಲಹ; ಮಗು ಸೇರಿ ಮೂವರು ಬಲಿ

ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಪುಟ್ಟ ಮಗು ಸೇರಿ ಮೂವರು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮಂಟಮೂರು ಗ್ರಾಮದಲ್ಲಿ ನಡೆದಿದೆ.

ಹೊಳೆಪ್ಪ ಮಾರುತಿ ಮಸ್ತಿ (25) ಪತ್ನಿ ವಾಸಂತಿ (22) ಹಾಗೂ ಒಂದೂವರೆ ವರ್ಷದ ಮಗು ಮೃತರು. ಕುಡಿದು ಬಂದು ಕಾಟಕೊಡುತ್ತಿದ್ದ ಪತಿಯ ಹಿಂಸೆಗೆ ಬೇಸತ್ತ ಪತ್ನಿ ವಾಸಂತಿ ಪ್ರಶ್ನೆ ಮಾಡಿದ್ದಳು.

ಇದಕ್ಕೆ ಜಗಳವಾಡಿದ್ದ ಪತಿ ಹೊಳೆಪ್ಪ, ಪತ್ನಿಯನ್ನು ಹೆದರಿಸಲು ವಿಷ ಕುಡಿದಿದ್ದ. ವಿಷಯ ತಿಳಿದು ಆತನ ಸ್ನೇಹಿತರು ಹೊಳೆಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಹೊಳೆಪ್ಪ ಸಾವನ್ನಪ್ಪಿದ್ದ.

ಮನನೊಂದ ಪತ್ನಿ ವಾಸಂತಿ ಮಗುವನ್ನು ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...