alex Certify BIG NEWS: ಕೇಸರಿ ಪೇಟ ಹಾಕಲು ಬಂದಾಗ ಸಿದ್ದರಾಮಯ್ಯ ಕಿತ್ತೆಸೆದರು, ಆದರೆ ಟೋಪಿ ಕಂಡರೆ ಅವರಿಗೆ ಬಹಳ ಪ್ರೀತಿ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ.ರವಿ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇಸರಿ ಪೇಟ ಹಾಕಲು ಬಂದಾಗ ಸಿದ್ದರಾಮಯ್ಯ ಕಿತ್ತೆಸೆದರು, ಆದರೆ ಟೋಪಿ ಕಂಡರೆ ಅವರಿಗೆ ಬಹಳ ಪ್ರೀತಿ; ವಿಪಕ್ಷ ನಾಯಕನ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಸರಿ ಪೇಟ ಹಾಕಲು ಬಂದರೆ ಕಿತ್ತೆಸೆದರು. ಆದರೆ ಟೋಪಿ ಕಂಡರೆ ಸಿದ್ದರಾಮಯ್ಯನವರಿಗೆ ಬಹಳ ಪ್ರೀತಿ ಎಂದು ಕಿಡಿಕಾರಿದ್ದಾರೆ.

ದೇವನಹಳ್ಳಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಸಿ.ಟಿ.ರವಿ, ಈ ಹಿಂದೆ ಕುಂಕುಮ ಇಟ್ಟವರನ್ನು ಕಂಡರೆ ಹೆದರಿಕೆ ಆಗುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ದರು. ನಮ್ಮ ತಾಯಂದಿರು ಕುಂಕುಮ ಇಡ್ತಾರೋ ಇಲ್ವೋ? ಕುಂಕುಮ ಇಟ್ಟವರು ಯಾರಾದರೂ ಬಾಂಬ್ ಹಾಕಿದ್ರಾ? ಕೇಸರಿ ಶಾಲು ಹಾಕಿದವರು ಯಾವತ್ತಾದರೂ ಗಲಭೆ ಸೃಷ್ಟಿಸಿದ್ದಾರೆಯೇ? ಟೋಪಿ ಹಾಕಿದವರು ಬಾಂಬ್ ಹಾಕಿದ್ದಾರೆ. ಸಿದ್ದರಾಮಯ್ಯನವರಿಗೆ ಟೋಪಿ ಕಂಡರೆ ಬಹಳ ಪ್ರೀತಿ. ಹಾಗಾಗಿ ಅವರ ಪರವಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೆ ಭಯೋತ್ಪಾದಕರಿಗೆ ಬಿರಿಯಾನಿ ತಿನ್ನಿಸುವ ಕಾಲವಿತ್ತು. ಇಗ ಭಯೋತ್ಪಾದನೆ ಮಾಡುವವರಿಗೆ ಬಿರಿಯಾನಿ ತಿನಿಸಲ್ಲ, ಬಂದೂಕಿನಿಂದ ದಾಳಿ ಮಾಡುವವರಿಗೆ ಸೈನಿಕರ ಬಂದೂಕಿನಿಂದಲೇ ಉತ್ತರ ಕೊಡುತ್ತೇವೆ. ಯಾರಾದರೂ ಬಾಲ ಬಿಚ್ಚಿದರೆ ಜೆಸಿಬಿ, ಬುಲ್ಡೋಜರ್ ಹೋಗುತ್ತೆ ಎಂದು ಎಚ್ಚರಿಕೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...