alex Certify BIG NEWS: ಕೇವಲ 50 ರೂಪಾಯಿಗಾಗಿ ಸ್ನೇಹಿತನ ಹತ್ಯೆಗೈದು ಯುವಕ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೇವಲ 50 ರೂಪಾಯಿಗಾಗಿ ಸ್ನೇಹಿತನ ಹತ್ಯೆಗೈದು ಯುವಕ ಪರಾರಿ

ಕೇವಲ 50 ರೂಪಾಯಿಗಾಗಿ ತನ್ನ ಸ್ನೇಹಿತನ ಹತ್ಯೆಗೈದ ಯುವಕನೊಬ್ಬ ಪರಾರಿಯಾಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. 24 ವರ್ಷದ ಶಿವಮಾದು ಹತ್ಯೆಯಾದವನಾಗಿದ್ದು, ಸ್ನೇಹಿತ ಶಾಂತಕುಮಾರ್‌ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.

ಬಸವೇಶ್ವರ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕುರುಬರ ಹಳ್ಳಿ ಸರ್ಕಲ್‌ ಬಳಿ ಈ ಘಟನೆ ನಡೆದಿದ್ದು, ಬಾಲ್ಯ ಸ್ನೇಹಿತರಾಗಿದ್ದ ಇವರುಗಳು ಈಗ ಬೇರೆ ಬೇರೆ ಕಡೆ ವಾಸಿಸುತ್ತಿದ್ದರೂ ಆಗಾಗ ಭೇಟಿಯಾಗುತ್ತಿದ್ದರು ಎನ್ನಲಾಗಿದೆ.

ಶಿವಮಾದು ಆಟೋ ಚಾಲಕನಾಗಿದ್ದರೆ, ಶಾಂತಕುಮಾರ್‌ ಝೋಮ್ಯಾಟೋ ಡೆಲಿವರಿ ಬಾಯ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಘಟನೆ ನಡೆದ ದಿನದಂದು ಭೇಟಿಯಾದ ಇಬ್ಬರು ಸಮೀಪದ ಗ್ರೌಂಡ್‌ ಒಂದಕ್ಕೆ ಹೋಗಿ ಕ್ರಿಕೆಟ್‌ ಆಡಿದ್ದಾರೆ. ನಂತರ ಕಾರ್ಯ ನಿಮಿತ್ತ ಬ್ರೌಸಿಂಗ್‌ ಸೆಂಟರ್‌ ಗೆ ಬಂದಿದ್ದಾರೆ.

ಈ ವೇಳೆ ಶಿವಮಾದು ಸ್ನೇಹಿತ ಶಾಂತಕುಮಾರ್‌ ಜೇಬಿನಿಂದ 50 ರೂಪಾಯಿ ತೆಗೆದುಕೊಂಡನೆನ್ನಲಾಗಿದ್ದು, ಈ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದುಹೋಗಿದೆ. ಬಳಿಕ ಶಾಂತಕುಮಾರ್‌ ತನ್ನ ಬಳಿಯಿದ್ದ ಚಾಕುವಿನಿಂದ ಶಿವಮಾದುಗೆ ಇರಿದು ಪರಾರಿಯಾಗಿದ್ದಾರೆ. ಇದರ ಪರಿಣಾಮ ಆತ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಯನ್ನು ಗುರುತಿಸಿರುವ ಬಸವೇಶ್ವರ ನಗರ ಠಾಣೆ ಪೊಲೀಸರು ಶಾಂತಕುಮಾರ್‌ ಬಂಧನಕ್ಕೆ ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...