alex Certify BIG NEWS: ಕುಟುಂಬ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್ ನಡೆಸುತ್ತಿರುವ ತ್ಯಾಗ ಶ್ಲಾಘನೀಯ: ಸೂರಜ್ ರೇವಣ್ಣ ರಾಜಕೀಯ ಎಂಟ್ರಿಗೆ ಬಿಜೆಪಿ ವ್ಯಂಗ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕುಟುಂಬ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್ ನಡೆಸುತ್ತಿರುವ ತ್ಯಾಗ ಶ್ಲಾಘನೀಯ: ಸೂರಜ್ ರೇವಣ್ಣ ರಾಜಕೀಯ ಎಂಟ್ರಿಗೆ ಬಿಜೆಪಿ ವ್ಯಂಗ್ಯ

ಬೆಂಗಳೂರು: ದೇವೇಗೌಡರ ಕುಟುಂಬದ ಮತ್ತೋರ್ವ ಸದಸ್ಯ ಸೂರಜ್ ರೇವಣ್ಣ ರಾಜಕೀಯ ಎಂಟ್ರಿಗೆ ವ್ಯಂಗ್ಯವಾಡಿರುವ ಬಿಜೆಪಿ ಕುಟುಂಬ ರಾಜಕಾರಣದಲ್ಲೂ ಮಾನದಂಡವನ್ನು ಹುಡುಕಲು ಹೊರಟರೆ ಅಲ್ಲಿಯೂ ಹೆಚ್.ಡಿ.ದೇವೇಗೌಡರದ್ದು ಒಂದು ಆದರ್ಶ ಕುಟುಂಬ. ಒಂದೇ ಕುಟುಂಬದ 8 ಜನರು ರಾಜಕಾರಣದಲ್ಲಿ ಸ್ಥಾನಮಾನ ಪಡೆದ ಕರ್ನಾಟಕದ ಏಕೈಕ ಪಕ್ಷ ಎಂಬ ಹೆಗ್ಗಳಿಕೆ ಪಡೆಯಲು ಕಾರಣವಾದ ಪ್ರಯತ್ನಕ್ಕೆ ಅಭಿನಂದನೆಗಳು ಎಂದು ಹೇಳಿದೆ.

ಜೆಡಿಎಸ್ ಪಕ್ಷದಲ್ಲಿ ದೊಡ್ದಗೌಡರ ಕುಟುಂಬದ ಎಲ್ಲಾ ಕವಲುಗಳೂ ರಾಜಕೀಯ ಸ್ಥಾನಮಾನ ಪಡೆಯುತ್ತಿದೆ. ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಕುಟುಂಬದ ಕಾರ್ಯಕರ್ತರ ಉಳಿವಿಗಾಗಿ ಜೆಡಿಎಸ್ ನಡೆಸುತ್ತಿರುವ ತ್ಯಾಗ ಶ್ಲಾಘನೀಯ ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಲೇವಡಿ ಮಾಡಿದೆ.

ಪಕ್ಷಕ್ಕೋಸ್ಕರ ನೀವು ದುಡಿಮೆ ಮಾಡಿ. ಅಧಿಕಾರವೂ ನಿಮ್ಮದೇ ಆಗಿರುತ್ತದೆ ಎಂದು ಈ ಹಿಂದೆ ಕುಮಾರಸ್ವಾಮಿ ಕಾರ್ಯಕರ್ತರಿಗೆ ಭರವಸೆ ನೀಡಿದ್ದರು. ಬಹುಶಃ ಜೆಡಿಎಸ್ ಕಾರ್ಯಕರ್ತರು ಶ್ರಮಪಡದ ಕಾರಣ ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣ ಅವರಿಗೆ ಈಗ ಟಿಕೆಟ್ ನೀಡಲಾಗಿದೆ ಎಂದು ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...