alex Certify Big News: ಕಾಡಾನೆ ದಾಳಿಗೆ ವೃದ್ಧ ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಕಾಡಾನೆ ದಾಳಿಗೆ ವೃದ್ಧ ಬಲಿ

ಕಾಡಾನೆ ದಾಳಿಗೆ ವೃದ್ಧರೊಬ್ಬರು ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ನಡೆದಿದೆ. 67 ವರ್ಷದ ಕೃಷ್ಣೇಗೌಡ ಮೃತಪಟ್ಟ ವ್ಯಕ್ತಿ.

ಇಂದು ಬೆಳಗ್ಗೆ ತಮ್ಮ ಮಗ ಸುದೇಶ್ ಹಾಗೂ ಮೊಮ್ಮಗ ಪ್ರಥಮ್ ಜೊತೆ ತೋಟಕ್ಕೆ ತೆರಳುವ ವೇಳೆ ಏಕಾಏಕಿ 3 ಕಾಡಾನೆಗಳು ದಾಳಿ ಮಾಡಿದ್ದವು. ಉಳಿದವರು ಓಡಿ ತಪ್ಪಿಸಿಕೊಂಡರೆ ಕೃಷ್ಣೇಗೌಡ ಓಡುವಾಗ ಕೆಳಗೆ ಬಿದ್ದಿದ್ದರು.

ಆಗ ಕಾಡಾನೆಗಳು ಅವರನ್ನು ತುಳಿದು ಸಾಯಿಸಿದ್ದು, ಕುಟುಂಬದ ಹಿರಿಯನನ್ನು ಕಳೆದುಕೊಂಡ ಕೃಷ್ಣೆಗೌಡರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ವೇಳೆ ಗ್ರಾಮಸ್ಥರು ಕಾಡಾನೆಗಳನ್ನು ಸೆರೆ ಹಿಡಿಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...