alex Certify BIG NEWS: ಕಾಂಗ್ರೆಸ್ ನಲ್ಲೂ ಗುಜರಾತ್ ಮಾದರಿ ಚರ್ಚೆ; ಸೀನಿಯರ್ ಎಂದು ಸೋಲುವವರಿಗೂ ಟಿಕೆಟ್ ಕೊಡೋದಲ್ಲ; ಕೈ ನಾಯಕರು ಗಮನಹರಿಸಲಿ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನಲ್ಲೂ ಗುಜರಾತ್ ಮಾದರಿ ಚರ್ಚೆ; ಸೀನಿಯರ್ ಎಂದು ಸೋಲುವವರಿಗೂ ಟಿಕೆಟ್ ಕೊಡೋದಲ್ಲ; ಕೈ ನಾಯಕರು ಗಮನಹರಿಸಲಿ ಎಂದ ಕೆಪಿಸಿಸಿ ಕಾರ್ಯಾಧ್ಯಕ್ಷ

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಹೇಳಿಕೆ ತಪ್ಪಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆಗೆ ಸಿದ್ಧ: ಸತೀಶ್ ಜಾರಕಿಹೊಳಿ- Kannada Prabha

ಬೆಳಗಾವಿ: ಗುಜರಾತ್ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿಯೂ ಗುಜರಾತ್ ಮಾದರಿ ಕೂಗು ಕೇಳಿಬರುತ್ತಿದೆ. ಗುಜರಾತ್ ನಲ್ಲಿನ ಟಿಕೆಟ್ ಹಂಚಿಕೆ ಮಾದರಿಯನ್ನು ಕಾಂಗ್ರೆಸ್ ನಲ್ಲಿಯೂ ತರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಸ್ಟ್ರ್ಯಾಟಜಿ ಮಾಡದೇ ರಾಜ್ಯದಲ್ಲಿ ನಾವು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಗುಜರಾತ್ ನಲ್ಲಿ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡಿದೆ. ಹಿಂದಿನ ಮೂರು ಚುನಾವಣೆಗಳಲ್ಲಿ 30-40 ಹೊಸಬರಿಗೆ ಟಿಕೆಟ್ ಹಂಚಲಾಗಿದೆ. ನಮ್ಮಲ್ಲಿ ಸೋಲುತ್ತಾರೆಂದು ಗೊತ್ತಿದ್ದರೂ ಮುಲಾಜಿಗೆ ಒಳಗಾಗಿ ಟಿಕೆಟ್ ನೀಡುತ್ತೇವೆ. ಈ ಕ್ರಮಕ್ಕೆ ಬ್ರೇಕ್ ಹಾಕಬೇಕು ಎಂದು ಹೇಳಿದ್ದಾರೆ.

ಹಿರಿಯರು ಎಂಬ ಕಾರಣಕ್ಕೆ ಟಿಕೆಟ್ ಕೊಡುತ್ತೇವೆ. ಗೆಲ್ಲುವ ಹಾಗೆ ಇದ್ರೆ ಮಾತ್ರ ಸಿನಿಯರ್ಸ್ ಗೆ ಟಿಕೆಟ್ ನೀಡಲಿ. ಈ ಬಗ್ಗೆ ಕಾಂಗ್ರೆಸ್ ಗಮನಹರಿಸಬೇಕು ಎಂದು ಹೇಳಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ ಎಂದು ಕಾಂಗ್ರೆಸ್ ನ ಹಲವು ನಾಯಕರುಗಳೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...