alex Certify BIG NEWS: ಕಾಂಗ್ರೆಸ್ ನಲ್ಲಿ ಡಿ.ಕೆ.ಶಿ V/S ಸಿದ್ದರಾಮಯ್ಯ ನಡೆಯುತ್ತಿದೆ; ಮೈತ್ರಿ ಸರ್ಕಾರದ ಪತನ ಹೇಗಾಯಿತೆಂದು HDK ನೆನಪು ಮಾಡಿಕೊಳ್ಳಲಿ; ಕಾಂಗ್ರೆಸ್-ಜೆಡಿಎಸ್ ವಿರುದ್ಧ ಸಚಿವ ಸೋಮಶೇಖರ್ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ನಲ್ಲಿ ಡಿ.ಕೆ.ಶಿ V/S ಸಿದ್ದರಾಮಯ್ಯ ನಡೆಯುತ್ತಿದೆ; ಮೈತ್ರಿ ಸರ್ಕಾರದ ಪತನ ಹೇಗಾಯಿತೆಂದು HDK ನೆನಪು ಮಾಡಿಕೊಳ್ಳಲಿ; ಕಾಂಗ್ರೆಸ್-ಜೆಡಿಎಸ್ ವಿರುದ್ಧ ಸಚಿವ ಸೋಮಶೇಖರ್ ವಾಗ್ದಾಳಿ

ಮೈಸೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸಲೀಂ ಹಾಗೂ ವಿ.ಎಸ್.ಉಗ್ರಪ್ಪ ಚರ್ಚೆ ವಿಚಾರವಾಗಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಇದೊಂದು ಷಡ್ಯಂತ್ರ, ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ V/S ಸಿದ್ದರಾಮಯ್ಯ ನಡೆಯುತ್ತಿದೆ ಎಂದು ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ಸಚಿವ ಸೋಮಶೇಖರ್, ಡಿಕೆಶಿ ಹಾಗೂ ಸಿದ್ದರಾಮಯ್ಯ ಒಬ್ಬರ ಮೇಲೊಬ್ಬರು ಪೈಪೋಟಿ ನಡೆಸಿ ಷಡ್ಯಂತ್ರ ಮಾಡಿ ಆರೋಪಗಳನ್ನು ಮಾಡುತ್ತಿದ್ದರು. ಈಗ ಅದು ಮುಂದುವರೆದಿದೆ. ಕಾಂಗ್ರೆಸ್ ನಲ್ಲಿ ಪರ್ಸಂಟೇಜ್ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಲ್ಲಿ ಶಾಸಕ ಮಾತ್ರ ಆಗಿದ್ದೆ ಎಂದರು.

ಹಬ್ಬದ ದಿನವೇ ಘೋರ ಕೃತ್ಯ: ಸಾಂಬಾರ್ ಸರಿಯಾಗಿಲ್ಲವೆಂದು ತಾಯಿ, ತಂಗಿ ಮೇಲೆ ಫೈರಿಂಗ್ –ಇಬ್ಬರೂ ಸಾವು

ಇನ್ನು ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್, ಮೈತ್ರಿ ಸರ್ಕಾರ ಉರುಳಲು ಕಾರಣವೇನು ಎಂಬುದನ್ನು ಕುಮಾರಸ್ವಾಮಿಯವರಿಗೆ ಗೊತ್ತು. ಅವರು ರಾತ್ರಿ ಮಲಗಿದಾಗ ಕಣ್ಮುಚ್ಚಿ ಎಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳಲಿ. ಸತ್ಯ ಏನೆಂಬುದು ಅರಿವಾಗುತ್ತೆ ಎಂದು ಹೇಳಿದರು.

ನಮಗೆ ಬಿಜೆಪಿಗೆ ಹೋಗುವಂತೆ ಸಿದ್ದರಾಮಯ್ಯ ಹೇಳಿರಲಿಲ್ಲ, ನಾವಾಗಿಯೇ ಬಿಜೆಪಿ ಸೇರುವ ನಿರ್ಧಾರ ಮಾಡಿದೆವು. ಕುಮಾರಸ್ವಾಮಿ ಆರೋಪದಲ್ಲಿ ಹುರುಳಿಲ್ಲ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...