alex Certify BIG NEWS: ಕಾಂಗ್ರೆಸ್ ಗೆ 3-4 ಶಾಪ ತಟ್ಟಿದೆ; ಅದಕ್ಕೆ ಅಲ್ಲಿನ ನಾಯಕರು ಪಕ್ಷ ತೊರೆಯುತ್ತಿದ್ದಾರೆ; ವಾಗ್ದಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಗೆ 3-4 ಶಾಪ ತಟ್ಟಿದೆ; ಅದಕ್ಕೆ ಅಲ್ಲಿನ ನಾಯಕರು ಪಕ್ಷ ತೊರೆಯುತ್ತಿದ್ದಾರೆ; ವಾಗ್ದಾಳಿ ನಡೆಸಿದ ನಳೀನ್ ಕುಮಾರ್ ಕಟೀಲ್

ಬೆಂಗಳೂರು; ಕಾಂಗ್ರೆಸ್ ನಾಯಕರಿಗೆ ರೈತರ ಕಣ್ಣೀರ ಶಾಪ ತಟ್ಟಿದೆ. ಹಾಗಾಗಿ ಹಲವರು ಪಕ್ಷವನ್ನೇ ತೊರೆಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಗೆ 3-4 ಶಾಪ ತಟ್ಟಿದೆ. ಗಾಂಧಿ ಹೆಸರಲ್ಲಿ ಮತ ಪಡೆದು ಗಾಂಧಿಗೆ ಅನ್ಯಾಯ ಮಾಡಿದರು. ಅಂಬೇಡ್ಕರ್ ಹೆಸರಲ್ಲಿ ಮತ ಪಡೆದು ಅನ್ಯಾಯ ಮಾಡಿದರು. ಕಾಂಗ್ರೆಸ್ ಪಕ್ಷದ ಮೂಲ ಚಿಹ್ನೆ ಹಸು ಮತ್ತು ಕರು. ಆ ಚಿಹ್ನೆ ಮೂಲಕ ಮತ ಪಡೆದು ಗೋವುಗಳಿಗೆ ಅನ್ಯಾಯ ಮಾಡಿದರು. ರೈತರ ಬಗ್ಗೆ ಕಣ್ಣೀರು ಹಾಕಿ ರೈತರಿಗೆ ಅನ್ಯಾಯ ಮಾಡಿದರು. ಈ ಎಲ್ಲಾ ಶಾಪಗಳು ಕಾಂಗ್ರೆಸ್ ನಾಯಕರಿಗೆ ತಟ್ಟಿದೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣಗಳ ನಡುವೆ ಕಿತ್ತಾಟ ನಡೆದಿದೆ. ಅಲ್ಲಿನ ಶಾಸಕರೇ ಪಕ್ಷ ತೊರೆದು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಪಕ್ಷ ಸಂಘಟನೆಯನ್ನೇ ಮಾಡಲು ಸಾಧ್ಯವಾಗದವರು ನಾಡನ್ನು ಹೇಗೆ ಅಭಿವೃದ್ಧಿ ಮಾಡುತ್ತಾರೆ ಎಂದು ಪ್ರಶ್ನಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...