alex Certify BIG NEWS: ಕರವೇ ಕಾರ್ಯಕ್ರಮದಲ್ಲಿ ಸಚಿವರ ವಿರುದ್ಧ ಜೆಡಿಎಸ್ ನಾಯಕನ ವಾಗ್ದಾಳಿ; ಆಲಿಬಾಬಾ ಹಾಗೂ 40 ಕಳ್ಳರು ಕಥೆ ಹೇಳಿ ಕ್ರೀಡಾ ಸಚಿವರನ್ನು ಟೀಕಿಸಿದ ಸಂತೋಷ್; ರೊಚ್ಚಿಗೆದ್ದ ನಾರಾಯಣಗೌಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕರವೇ ಕಾರ್ಯಕ್ರಮದಲ್ಲಿ ಸಚಿವರ ವಿರುದ್ಧ ಜೆಡಿಎಸ್ ನಾಯಕನ ವಾಗ್ದಾಳಿ; ಆಲಿಬಾಬಾ ಹಾಗೂ 40 ಕಳ್ಳರು ಕಥೆ ಹೇಳಿ ಕ್ರೀಡಾ ಸಚಿವರನ್ನು ಟೀಕಿಸಿದ ಸಂತೋಷ್; ರೊಚ್ಚಿಗೆದ್ದ ನಾರಾಯಣಗೌಡ

ಕೆ.ಆರ್.ಪೇಟೆ: ಕರವೇ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಜೆಡಿಎಸ್ ನಾಯಕ ಹಾಗೂ ಸಚಿವ ನಾರಾಯಣಗೌಡ ನಡುವೆ ವಾಗ್ವಾದ ನಡೆದ ಘಟನೆ ಬೆಳಕಿಗೆ ಬಂದಿದೆ.

ರಾಜ್ಯೋತ್ಸವದ ವೇದಿಕೆಯಲ್ಲಿ ಜೆಡಿಎಸ್ ನ ಸಂತೋಷ್, ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸುತ್ತಾ, ಪರೋಕ್ಷವಾಗಿ ಸಚಿವ ನಾರಾಯಣಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿ ಎಲ್ಲಾ ಮಹನೀಯರೂ ಇರ್ತಾರೆ. ಆದ್ರೆ ನಿಮಗೆ ಆಲಿಬಾಬಾ ಕಥೆ ಹೇಳುತ್ತೇನೆ. ಆಲಿಬಾಬಾ ಹಿಂದೆ 40 ಜನ ಕಳ್ಳರನ್ನು ಸಾಕಿದ್ದರು. ಆದರೆ ಈಗ ಇಲ್ಲಿ ಆಲಿಬಾಬಾ ಜೊತೆ ಬರಿ ನಾಲ್ಕು ಕಳ್ಳರಷ್ಟೇ ಇದ್ದಾರೆ ಎಂದು ಲೇವಡಿ ಮಾಡಿದರು.

ಸಂತೋಷ್ ಮಾತಿಗೆ ಕೆರಳಿ ಕೆಂಡವಾದ ಸಚಿವ ನಾರಾಯಣಗೌಡ, ವೇದಿಕೆಗೆ ನುಗ್ಗಿ ಮೈಕ್ ಕಿತ್ತುಕೊಂಡು ಯಾರು ಆಲಿಬಾಬಾ ? ಯಾರ ಬಗ್ಗೆ ಮಾತನಾಡುತ್ತಿದ್ದೀಯಾ ? ಎಂದು ಗುಡುಗಿದರು. ಕೆಲಕಾಲ ವೇದಿಕೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...