alex Certify BIG NEWS: ಕಮೀಷನರ್ ಕಮಲ್ ಪಂತ್ ಬದಲಾವಣೆಗೆ ಸಿಎಂ ಚಿಂತನೆ; ಖಡಕ್ ಅಧಿಕಾರಿ ಪಟ್ಟಕ್ಕೇರಿಸಲು ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಮೀಷನರ್ ಕಮಲ್ ಪಂತ್ ಬದಲಾವಣೆಗೆ ಸಿಎಂ ಚಿಂತನೆ; ಖಡಕ್ ಅಧಿಕಾರಿ ಪಟ್ಟಕ್ಕೇರಿಸಲು ಪ್ಲಾನ್

ಬೆಂಗಳೂರು: ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂತ್ ಬದಲಾವಣೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಚಿಂತನೆ ನಡೆಸಿದ್ದು, ಕಮಲ್ ಪಂತ್ ಜಾಗಕ್ಕೆ ಖಡಕ್ ಪೊಲೀಸ್ ಅಧಿಕಾರಿ ನೇಮಕ ಮಾಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಮುಂದಿನ ವಾರವೇ ಕಮಲ್ ಪಂತ್ ಬದಲಾವಣೆಯಾಗುವ ಸಾಧ್ಯತೆ ಇದೆ. ಧರ್ಮ ಸಂಘರ್ಷ, ಜೆ.ಜೆ.‌ ನಗರದ ಯುವಕನ ಹತ್ಯೆ ಪ್ರಕರಣಗಳ ವಿವಾದ ಬೆನ್ನಲ್ಲೇ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬದಲಾವಣೆಗೆ ಚಿಂತನೆ ನಡೆಸಿದೆ.

ಬೆಂಗಳೂರು ಕಮೀಷನರ್ ರೇಸ್ ನಲ್ಲಿ ಕೆ ಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್ ಹೆಸರು ಕೇಳಿಬರುತ್ತಿದ್ದು, ನೂತನ ಕಮೀಷನರ್ ಆಗಿ ಸರ್ಕಾರ ಯಾರನ್ನು ನೇಮಕ ಮಾಡಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...