alex Certify BIG NEWS: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ; ಪತ್ನಿ ವಿರುದ್ಧವೇ ದೂರು ದಾಖಲಿಸಿದ ಸಂಪಾದಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ಕುಟುಂಬದ ಐವರು ಆತ್ಮಹತ್ಯೆ ಪ್ರಕರಣ; ಪತ್ನಿ ವಿರುದ್ಧವೇ ದೂರು ದಾಖಲಿಸಿದ ಸಂಪಾದಕ

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಐವರು ಸದಸ್ಯರ ಆತ್ಮಹತ್ಯೆ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ತನ್ನ ಪತ್ನಿಯ ವಿರುದ್ಧವೇ ದೂರು ದಾಖಲಿಸಿದ್ದಾರೆ.

ಕುಟುಂಬದವರು ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ಪತ್ನಿ ಭಾರತಿ ಪ್ರಚೋದನೆಯೇ ಕಾರಣ. ಮಗಳು ಸಿಂಚನಾ ಗಂಡನ ಕುಟುಂಬ ವರ್ಗದವರ ಜೊತೆ ಹೊಂದಿಕೊಂಡಿರಲಿಲ್ಲ. ಇದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅಳಿಯ ಏನಾದರೂ ಆಗಲಿ ನನ್ನ ಮಗಳು ಮಾತ್ರ ಚೆನ್ನಾಗಿರಬೇಕು ಎಂದು ನನ್ನ ಪತ್ನಿ ಹೆಳುತ್ತಿದ್ದಳು. ಮಗಳನ್ನು ಅಳಿಯನ ಮನೆಗೆ ಕಳುಹಿಸು ಎಂದರೂ ಕಳಿಸುತ್ತಿರಲಿಲ್ಲ. ಘಟನೆಗೆ ನನ್ನ ಪತ್ನಿಯೇ ಕಾರಣ ಎಂದು ಶಂಕರ್ ಪೊಲಿಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆ ಒಮ್ಮೆ ಗಂಡನನ್ನು ಹೆದರಿಸಲು ಮಗಳು ಕೈ ಕುಯ್ದುಕೊಂಡಿದ್ದಳು. ನಾನು ಬುದ್ಧಿವಾದ ಹೇಳಿದ್ದಕ್ಕೆ ಅಳಿಯನ ಪರವಾಗಿ ಮಾತನಾಡುತ್ತೀಯಾ ಎಂದು ನನ್ನ ಪತ್ನಿ ಭಾರತಿ ನನ್ನನ್ನು ಹೀನಾಮಾನವಾಗಿ ಬಾಯಿಗೆ ಬಂದಂತೆ ಬೈದಿದ್ದಳು. ಇನ್ನು ಇನ್ನೋರ್ವ ಮಗಳು ಸಿಂಧೂರಾಣಿ ಕೂಡ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು 8 ಪುಟಗಳ ದೂರಿನಲ್ಲಿ ಶಂಕರ್ ವಿವರಿಸಿದ್ದಾರೆ.

ಸ್ಥಳೀಯ ಪತ್ರಿಕೆ ಸಂಪಾದಕ ಶಂಕರ್ ಅವರ ಕುಟುಂಬದ ಐವರು ಸದಸ್ಯರ ಆತ್ಮಹತ್ಯೆ ಪ್ರಕರಣ ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. 4-5 ದಿನಗಳ ಹಿಂದೆಯೇ ಕುಟುಂಬ ಸದಸ್ಯರು ಬ್ಯಾಡರಹಳ್ಳಿಯ ಐಷಾರಾಮಿ ಮನೆಯಲ್ಲಿ ನೇಣಿಗೆ ಶರಣಾಗಿದ್ದು, 2 ವರ್ಷದ ಮಗು ಮಾತ್ರ ಹೆಣಗಳ ನಡುವೆ ಬದುಕುಳಿದಿರುವುದು ಅಚ್ಚರಿ ತಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...