alex Certify BIG NEWS: ಏಕೀಕೃತ ಕರ್ನಾಟಕದ ವಿರುದ್ಧ ಕತ್ತಿ ಬೀಸುತ್ತಲೇ ಇದ್ದರೂ ತುಟಿ ಬಿಚ್ಚದ ಬಿಜೆಪಿ ಸರ್ಕಾರ; ಉಮೇಶ್ ಕತ್ತಿಯನ್ನು ಸಂಪುಟದಿಂದ ವಜಾಗೊಳಿಸಿ; ಡಿ.ಕೆ.ಶಿ ಆಗ್ರಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಏಕೀಕೃತ ಕರ್ನಾಟಕದ ವಿರುದ್ಧ ಕತ್ತಿ ಬೀಸುತ್ತಲೇ ಇದ್ದರೂ ತುಟಿ ಬಿಚ್ಚದ ಬಿಜೆಪಿ ಸರ್ಕಾರ; ಉಮೇಶ್ ಕತ್ತಿಯನ್ನು ಸಂಪುಟದಿಂದ ವಜಾಗೊಳಿಸಿ; ಡಿ.ಕೆ.ಶಿ ಆಗ್ರಹ

ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದಿರುವ ಸಚಿವ ಉಮೇಶ್ ಕತ್ತಿ ಅವರನ್ನು ಮುಖ್ಯಮಂತ್ರಿಗಳು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಸಚಿವರು ಏಕೀಕೃತ ಕರ್ನಾಟಕದ ವಿರುದ್ಧ ಕತ್ತಿ ಬೀಸುತ್ತಲೇ ಇದ್ದರೂ ತುಟಿ ಬಿಚ್ಚದ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಸರಣಿ ಟ್ವೀಟ್ ಮೂಲಕ ಡಿ,ಕೆ.ಶಿವಕುಮಾರ್ ಕಿಡಿ ಕಾರಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಇದೇ ನೆಲದ ನೀರು, ಅನ್ನ ಸೇವಿಸಿ ಈಗ ಇದೇ ನೆಲಕ್ಕೆ ಬಿಜೆಪಿ ನಾಯಕರು ದ್ರೋಹ ಬಗೆಯುತ್ತಿದ್ದಾರೆ. ತಾಯಿ ನೆಲವನ್ನು ಅವಮಾನಿಸುವುದು ಒಂದೇ, ಹೆತ್ತ ತಾಯಿಯನ್ನು ಅವಮಾನಿಸುವುದು ಒಂದೇ. ಉತ್ತರ ಕರ್ನಾಟಕ ಇಂದಿಗೂ ಎಂದಿಗೂ ಕರ್ನಾಟಕದ ಭಾಗವಾಗೇ ಉಳಿಯುತ್ತದೆ. ಕರ್ನಾಟಕದಿಂದ ಬೇರ್ಪಡಿಸಲು ಸಾಧ್ಯವೇ ಇಲ್ಲ. ಇದು ಕಾಂಗ್ರೆಸ್ ಪ್ರತಿಜ್ಞೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...