alex Certify BIG NEWS: ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುವುದೇ ನಿಮ್ಮ ಹೆಗ್ಗುರಿ ಆಗಲಿ; ನಂಬಿಕೆ ನಮ್ಮಲ್ಲೇ ಇರಲಿ, ಗುರಿ ದಿಗಂತದಷ್ಟು ವಿಶಾಲವಾಗಿರಲಿ; ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ HDK ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುವುದೇ ನಿಮ್ಮ ಹೆಗ್ಗುರಿ ಆಗಲಿ; ನಂಬಿಕೆ ನಮ್ಮಲ್ಲೇ ಇರಲಿ, ಗುರಿ ದಿಗಂತದಷ್ಟು ವಿಶಾಲವಾಗಿರಲಿ; ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ HDK ಕಿವಿಮಾತು

ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಶುರುವಾಗುತ್ತಿವೆ. ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಶುಭ ಹಾರೈಕೆಗಳು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಿಯುಸಿ ಪರೀಕ್ಷೆ ಎಂದರೆ, ಶೈಕ್ಷಣಿಕ ಜೀವನದ ಮಹತ್ವದ ಘಟ್ಟ. ಮುಂದಿನ ಬದುಕಿಗೆ ದಿಕ್ಸೂಚಿ. ಭಯ, ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಉಜ್ವಲ ಭವಿಷ್ಯ ನಿಮ್ಮದಾಗಲಿ ಎಂದು ಸರಣಿ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ವಿದ್ಯಾರ್ಥಿಗಳೇ, ಪರೀಕ್ಷೆ ತೇರ್ಗಡೆಯಾಗಿ ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುವುದೇ ನಿಮ್ಮ ಹೆಗ್ಗುರಿ ಆಗಲಿ. ಈ ಗೆಲುವು ನಿಮ್ಮ ತಂದೆ-ತಾಯಿ ಕಣ್ಣಲ್ಲಿ ಆನಂದಬಾಷ್ಪಕ್ಕೆ ಕಾರಣವಾಗಲಿ. ನನ್ನ ಪ್ರಕಾರ, ಬದುಕಿಗಿಂತ ದೊಡ್ಡದು ಬೇರಾವುದೂ ಇಲ್ಲ. ಈ ಪರೀಕ್ಷೆ ಕಡೆಗಣಿಸಿ ಜೀವನದುದ್ದಕ್ಕೂ ಬವಣೆಗೆ ಸಿಲುಕಿಕೊಳ್ಳಬೇಡಿ.

ನಮ್ಮ ನಂಬಿಕೆಗಳು ನಮ್ಮಲ್ಲೇ ಇರಲಿ. ನಿಮ್ಮ ಗುರಿ ದಿಗಂತದಷ್ಟು ವಿಶಾಲವಿರಲಿ. ನೆನಪಿರಲಿ, ಈ ಒಂದು ಪರೀಕ್ಷೆ ನಿಮ್ಮ ಬದುಕಿನ ಪಥವನ್ನೇ ಬದಲಿಸುತ್ತದೆ ಎಂದು ಕಿವಿಮಾತು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...