alex Certify BIG NEWS: ಉಕ್ರೇನ್​ನಿಂದ ಈವರೆಗೆ ಮರಳಿದ್ದಾರೆ 6000 ಭಾರತೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಕ್ರೇನ್​ನಿಂದ ಈವರೆಗೆ ಮರಳಿದ್ದಾರೆ 6000 ಭಾರತೀಯರು

ಉಕ್ರೇನ್​ನಲ್ಲಿ ಸಿಲುಕಿರುವ 20 ಸಾವಿರ ಮಂದಿ ಭಾರತೀಯರಲ್ಲಿ ಇದುವರೆಗೆ ಆರು ಸಾವಿರಕ್ಕೂ ಅಧಿಕ ಮಂದಿ ಭಾರತೀಯರನ್ನು ತಾಯ್ನಾಡಿಗೆ ಮರಳಿ ತರಲಾಗಿದೆ, ಹಾಗೂ ಉಳಿದ ಭಾರತೀಯರನ್ನೂ ದೇಶಕ್ಕೆ ಕರೆ ತರಲು ಕೇಂದ್ರ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಕೇಂದ್ರ ವಿದೇಶಾಂಗ​ ವ್ಯವಹಾರಗಳ ರಾಜ್ಯ ಸಚಿವ ವಿ. ಮುರುಳೀಧರನ್​​ ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ, ಮುರುಳೀಧನರ್​, ಸರಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ಉಕ್ರೇನ್​ನಲ್ಲಿ ಸಿಲುಕಿದ್ದಾರೆ. ಇವರಲ್ಲಿ ನಾಲ್ಕು ಸಾವಿರ ಮಂದಿ ಫೆಬ್ರವರಿ 24ರ ಒಳಗಾಗಿ ಭಾರತಕ್ಕೆ ಮರಳಿದ್ದಾರೆ. ನಿನ್ನೆಯವರೆಗೆ ಇನ್ನೂ 2 ಸಾವಿರ ಮಂದಿ ಭಾರತೀಯ ಏರ್​ ಪೋರ್ಟ್ಗಳಲ್ಲಿ ಬಂದಿಳಿದಿದ್ದಾರೆ. ನಾವು ರೋಮೆನಿಯಾ, ಪೊಲ್ಯಾಂಡ್​, ಹಂಗೇರಿ ಹಾಗೂ ಮಾಲ್ಡೋವಾದ ಮೂಲಕ ಭಾರತೀಯರನ್ನು ದೇಶಕ್ಕೆ ಮರಳಿ ತರುವ ಕಾರ್ಯ ಮಾಡ್ತಿದ್ದೇವೆ ಎಂದು ಹೇಳಿದರು.

ಉಕ್ರೇನ್​ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಪೋಷಕರ ಜೊತೆಯಲ್ಲಿ ಮಾತನಾಡಿದ ವಿ. ಮರುಳೀಧರನ್​ ಅವರಿಗೆ ಆಪರೇಷನ್​ ಗಂಗಾ ಕಾರ್ಯಾಚರಣೆಯ ಅಡಿಯಲ್ಲಿ ಶೀಘ್ರದಲ್ಲಿಯೇ ನಿಮ್ಮ ಮಕ್ಕಳನ್ನು ನಿಮ್ಮ ಮಡಿಲಿಗೆ ಸೇರಿಸಲಾಗುತ್ತದೆ ಎಂಬ ಭರವಸೆ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...