alex Certify BIG NEWS: ಈ ನಾಲ್ವರು ರಾಜಕಾರಣಿಗಳು ರಾಜ್ಯಕ್ಕೆ ಕಂಟಕ; ಸಚಿವ ಈಶ್ವರಪ್ಪ ವಾಗ್ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈ ನಾಲ್ವರು ರಾಜಕಾರಣಿಗಳು ರಾಜ್ಯಕ್ಕೆ ಕಂಟಕ; ಸಚಿವ ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ರಾಜ್ಯದಲ್ಲಿರುವ ಮುಸ್ಲಿಂರನ್ನು ಹಾಳು ಮಾಡಲೆಂದೇ ನಾಲ್ವರು ರಾಜಕಾರಣಿಗಳು ಇದ್ದಾರೆ. ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್ ಹಾಗೂ ಜಮೀರ್ ಅಹ್ಮದ್ ಈ ನಾಲ್ವರು ರಾಜ್ಯಕ್ಕೆ ಕಂಟಕ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಈಶ್ವರಪ್ಪ, ಹಿಜಾಬ್ ವಿವಾದ ಆರಂಭಿಸಿದ 6 ವಿದ್ಯಾರ್ಥಿನಿಯರಿಗೆ ಈ ನಾಲ್ವರು ಮಹಾಪುರುಷರು ಬುದ್ಧಿವಾದ ಹೇಳಿದ್ದರೆ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.

ಮಕ್ಕಳ ಬೆನ್ನ ಮೇಲೆ ಕುಟುಂಬಸ್ಥರ ವಿವರವನ್ನು ಬರೆದಿಡುತ್ತಿದ್ದಾರೆ ಉಕ್ರೇನ್​​ನ ತಾಯಂದಿರು..!

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಂಪೂರ್ಣ ಬಹುಮತ ಬಂದಿದೆ. ಇದಕ್ಕೆ ಕಾರಣ ಸಂವಿಧಾನ ಹಾಗೂ ಕೋರ್ಟ್ ಗೆ ಕೊಟ್ಟ ಗೌರವ. ಯೋಗಿ ಆದಿತ್ಯನಾಥ್ ಎಲ್ಲರನ್ನೂ ಸಮಾನರಾಗಿ ನೋಡಿದ್ದಾರೆ. ಮುಸ್ಲಿಂ ಮಹಿಳೆಯರು ಯೋಗಿ ಪರವಾಗಿ ಪ್ರಚಾರ ನಡೆಸಿದ್ದರು. ಈ ಬಗ್ಗೆ ವಿಪಕ್ಷ ನಾಯಕರು ಅರಿತುಕೊಳ್ಳಲಿ ಎಂದರು.

ರಾಜ್ಯ ಇಂದು ಶಾಂತಿಯಲ್ಲಿದೆ. ಅದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ಅವರಿಗೆ ಬೇಕಿಲ್ಲ. ಹಿಂದೂ-ಮುಸ್ಲಿಂ ನಡುವೆ ಒಡಕು ಮೂಡಿಸಬೇಕಿದೆ. ಮುಸ್ಲಿಂ ಮತಗಳನ್ನು ಮಾತ್ರ ಪಡೆಯಬೇಕಿದೆ. ಅವರ ಪರ ಜೋರಾಗಿ ಕೂಗಿದ್ರೆ ಮತಗಳು ಬರುತ್ತವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಕಿಡಿಕಾರಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...