alex Certify BIG NEWS: ಈಜಲು ಹೋಗಿದ್ದ 6 ವಿದ್ಯಾರ್ಥಿಗಳಲ್ಲಿ ಇಬ್ಬರು ದುರ್ಮರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಈಜಲು ಹೋಗಿದ್ದ 6 ವಿದ್ಯಾರ್ಥಿಗಳಲ್ಲಿ ಇಬ್ಬರು ದುರ್ಮರಣ

ಬೆಂಗಳೂರು; ಹೊಂಡದಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೊರವಲಯದ ದೇವನಹಳ್ಳಿ ಬಳಿ ನಡೆದಿದೆ.

ವಸತಿ ಶಾಲೆಯ 6 ಮಕ್ಕಳು ಹಾಸ್ಟೇಲ್ ನಿಂದ ಹೊರ ಬಂದು ದೇವನಹಳ್ಳಿ ಬಳಿ ಹೊಂಡದಲ್ಲಿ ಈಜಲು ಹೋಗಿದ್ದರು. ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಂತೋಷ್ ಹಾಗೂ ಜುನೇದ್ ಪಾಷಾ ಮೃತ ವಿದ್ಯಾರ್ಥಿಗಳು.

ಶಾಲೆಯಿಂದ ಎಲ್ಲರೂ ಪ್ರವಾಸಕ್ಕೆ ಹೋಗಿದ್ದರು.ಆದರೆ 6 ಮಕ್ಕಳು ಮಾತ್ರ ಪ್ರವಾಸಕ್ಕೆ ಹೋಗದೇ ಹಾಸ್ಟೇಲ್ ನಲ್ಲಿಯೇ ಉಳಿದಿದ್ದರು. ಹಾಸ್ಟೇಲ್ ನಲ್ಲಿದ್ದ ಯುವಕನಿಗೆ ಮಕ್ಕಳ ಜವಾಬ್ದಾರಿ ವಹಿಸಿ ಶಿಕ್ಷಕರು ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಹಾಸ್ಟೇಲ್ ನಲ್ಲಿದ್ದ 6 ವಿದ್ಯಾರ್ಥಿಗಳು ಈಜಲೆಂದು ಹೊರಗೆ ಬಂದಿದ್ದಾರೆ. ಈಜಲು ಬಾರದಿದ್ದರೂ ಹೊಂಡಕ್ಕೆ ಇಳಿದಿದ್ದೇ ದುರಂತಕ್ಕೆ ಕಾರಣ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...