alex Certify BIG NEWS: ಇದೇನು ಬೀಗರ ಮನೆಯೇ…..? ಕಲಾಪಕ್ಕೆ ಗೈರಾಗುತ್ತಿದ್ದ ಸಚಿವರಿಗೆ ಖಡಕ್ ಕ್ಲಾಸ್ ತೆಗೆದುಕೊಂಡ ಪರಿಷತ್ ಸಭಾಪತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇದೇನು ಬೀಗರ ಮನೆಯೇ…..? ಕಲಾಪಕ್ಕೆ ಗೈರಾಗುತ್ತಿದ್ದ ಸಚಿವರಿಗೆ ಖಡಕ್ ಕ್ಲಾಸ್ ತೆಗೆದುಕೊಂಡ ಪರಿಷತ್ ಸಭಾಪತಿ

ಬೆಂಗಳೂರು: ವಿಧಾನ ಪರಿಷತ್ ಕಲಾಪಕ್ಕೆ ಗೈರಾದ ಸಚಿವರ ಬಗ್ಗೆ ಸಭಾಪತಿ ಬಸವರಾಜ್ ಹೊರಟ್ಟಿ ಸದನವೇನು ಬೀಗರ ಮನೆ ಅಂದುಕೊಂಡಿದ್ದೀರೆ? ಎಂದು ಕಿಡಿಕಾರಿದ್ದಾರೆ.

ಪರಿಷತ್ ಕಲಾಪಕ್ಕೆ ಸದಸ್ಯರು ಗೈರಾಗುತ್ತಿರುವ ಬಗ್ಗೆ ಮೊದಲಿನಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಸ್ಪೀಕರ್ ಹೊರಟ್ಟಿ, ಇಂದು ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಪ್ರಶ್ನೋತ್ತರ ಕಲಾಪದ ವೇಳೆ ಸಚಿವರ ಹೆಸರುಗಳನ್ನು ಓದಿ ಹೇಳಿದ ಸಭಾಪತಿಗಳಿಗೆ, ಸಚಿವ ಅಶ್ವತ್ಥ ನಾರಾಯಣ, ಡಾ.ಸುಧಾಕರ್, ಸುನೀಲ್ ಕುಮಾರ್, ನಾಗೇಶ್ ಸದನಕ್ಕೆ ಗೈರಾಗಿರುವುದು ತಿಳಿದುಬಂದಿದೆ. ಬಹುತೇಕ ಸಚಿವರು ಸದನದಲ್ಲಿ ಗೈರಾಗಿರುವುದಕ್ಕೆ ಗರಂ ಆದ ಸಭಾಪತಿಗಳು ಇದೆಂತಹ ಬೇಜವಾಬ್ದಾರಿ ಎಂದು ಕೆಂಡಕಾರಿದ್ದಾರೆ.

ಆಲ್ ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನಕ್ಕೇರಿದ ರವೀಂದ್ರ ಜಡೇಜಾ…!

ಈ ವೇಳೆ ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, 10 ನಿಮಿಷದಲ್ಲಿ ಸಚಿವರು ಸದನಕ್ಕೆ ಬರುತ್ತಾರೆ ಎಂದು ಸಮಜಾಯಿಷಿ ನೀಡಿದ್ದಾರೆ. ಸಭಾನಾಯಕರ ಹೇಳಿಕೆಗೆ ಇನ್ನಷ್ಟು ಅಸಮಾಧಾನಗೊಂಡ ಸ್ಪೀಕರ್, ಇದೇನು ಬೀಗರ ಮನೆಯಾ? ಮನಸಿಗೆ ಬಂದಾಗ ಸದನಕ್ಕೆ ಬಂದು ಹೋಗಲು. ಪ್ರತಿ ದಿನ ಇದೇ ಕತೆಯಾದರೆ ಸದನ ನಡೆಸುವವರು ಯಾರು? ಎಂದು ಕಿಡಿಕಾರಿದ್ದಾರೆ. ನಾಳೆಯಿಂದ ಕಲಾಪಕ್ಕೆ ಸಚಿವರು ಕಡ್ಡಾಯವಾಗಿ ಹಾಜರಾಗಿರಬೇಕು. ಇಂತಹ ಸಂದರ್ಭ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...