alex Certify BIG NEWS: ಇದು ನನ್ನ ಜೀವನದ ಅಪೂರ್ವ ಸಮಯ; ಕಾಂಗ್ರೆಸ್ ಮುಖವಾಡ ಕಳಚಿ ಬಿದ್ದಿದೆ; ಮತಾಂತರ ನಿಷೇಧ ಬಿಲ್ ಪಾಸ್ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇದು ನನ್ನ ಜೀವನದ ಅಪೂರ್ವ ಸಮಯ; ಕಾಂಗ್ರೆಸ್ ಮುಖವಾಡ ಕಳಚಿ ಬಿದ್ದಿದೆ; ಮತಾಂತರ ನಿಷೇಧ ಬಿಲ್ ಪಾಸ್ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ

ಶಾಸಕ ಜ್ಞಾನೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ ಕನ್ಫರ್ಮ್..? | Thirthahalli MLA Araga jnanendra Confidents About Minister Post in bommai cabinet snr

ಬೆಂಗಳೂರು: ಮತಾಂತರ ನಿಷೇಧ ಬಿಲ್ ಪಾಸ್ ಆಗಿದ್ದು ಸಂತಸ ತಂದಿದೆ. ಗೋಹತ್ಯೆ ನಿಷೇಧ, ಮತಾಂತರ ನಿಷೇಧ ಪ್ರಮುಖ ಕಾಯ್ದೆಗಳಾಗಿದ್ದವು. ಈ ಕಾಯ್ದೆ ಮಂಡನೆಯಾಗಿ ಅಂಗೀಕಾರವಾಗಿದ್ದು, ನಿಜಕ್ಕೂ ಖುಷಿ ತಂದಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಬಿಜೆಪಿ ಸರ್ಕಾರದಲ್ಲಿನ ಎರಡು ಪ್ರಮುಖ ಬಿಲ್ ಗಳು ಪಾಸಾಗಿವೆ. ನನ್ನ ಜೀವನದ ಅಪೂರ್ವ ಸಮಯವಿದು. ಸರ್ವಧರ್ಮ ಸಹಿಷ್ಣತೆಯ ದೇಶ ನಮ್ಮ ಭಾರತ. ಹಿಂದೂ ಸಂಸ್ಕೃತಿಯ ತಳ ಅಲ್ಲಾಡಿಸುವ ಕೆಲಸವಾಗುತ್ತಿತ್ತು. ಧಾರ್ಮಿಕ ಸ್ವಾತಂತ್ರ್ಯದ ದುರುಪಯೋಗವಾಗುತ್ತಿತ್ತು. ಹಾಗಾಗಿ ಮತಾಂತರ ನಿಷೇಧಕ್ಕೆ ಬಿಗಿ ಕಾಯ್ದೆ ತರಲಾಗಿದೆ ಎಂದು ತಿಳಿಸಿದರು.

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಲ್ ಹರಿದು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಾಂಗ್ರೆಸ್ ನವರ ಮುಖವಾಡ ಕಳಚಿಬಿದ್ದಿದೆ. ಕಾಂಗ್ರೆಸ್ ನವರಿಗೆ ರಾಜ್ಯದ ಜನರ ಕಾಳಜಿಯಿಲ್ಲ. ಬದಲಿಗೆ ಅವರಿಗೆ ತಮ್ಮ ಖುರ್ಚಿ ಗಟ್ಟಿ ಆಗಬೇಕು ಅಷ್ಟೇ ಎಂದು ವಾಗ್ದಾಳಿ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...