alex Certify BIG NEWS: ಇದು ದೇಶದ್ರೋಹಿಗಳು ಮಾಡಿರುವ ಕುತಂತ್ರ; ಷಡ್ಯಂತ್ರಕ್ಕೆ ಪ್ರಧಾನಿ ಮೋದಿ ಬಲಿಯಾಗಲು ಸಾಧ್ಯವಿಲ್ಲ; ಸಚಿವ ಈಶ್ವರಪ್ಪ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇದು ದೇಶದ್ರೋಹಿಗಳು ಮಾಡಿರುವ ಕುತಂತ್ರ; ಷಡ್ಯಂತ್ರಕ್ಕೆ ಪ್ರಧಾನಿ ಮೋದಿ ಬಲಿಯಾಗಲು ಸಾಧ್ಯವಿಲ್ಲ; ಸಚಿವ ಈಶ್ವರಪ್ಪ ಆಕ್ರೋಶ

ಬೆಂಗಳೂರು: ಪ್ರಧಾನಿ ಮೋದಿಯವರಿಗೆ ಜೀವ ಬೆದರಿಕೆ ಇ-ಮೇಲ್ ಸಂದೇಶ ವಿಚಾರವಾಗಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ಇದು ಹೇಡಿಗಳು, ದೇಶದ್ರೋಹಿಗಳು ಮಾಡುತ್ತಿರುವ ಕುತಂತ್ರ ಇದಕ್ಕೆ ಪ್ರಧಾನಿ ಮೋದಿ ಬಲಿಯಾಗಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿ ಹತ್ಯೆ ಮಾಡಲು ಸಾಧ್ಯವಿಲ್ಲ. ಇಡೀ ದೇಶದ ಜನರ ಹೃದಯವನ್ನು ಮೋದಿ ಗೆದ್ದಿದ್ದಾರೆ. ಮೋದಿ ಬಗ್ಗೆ ಯಾರೇ ಮಾತನಾಡಿದರೂ ಆಕ್ರೋಶ ವ್ಯಕ್ತವಾಗುತ್ತೆ. ಎದುರಿಗೆ ಬಂದು ಮಾತನಾಡುವ ಧೈರ್ಯ, ಶಕ್ತಿ ಯಾರಿಗೂ ಇಲ್ಲ. ಇ-ಮೇಲ್ ಕಳಿಸುವುದು, ಕರೆ ಮಾಡುವುದು ಹೇಡಿಗಳ ಕೆಲಸ. ದೇಶದ್ರೋಹಿಗಳು ಈ ಷಡ್ಯಂತ್ರ ನಡೆಸಿದ್ದಾರೆ ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಜಗತ್ತಿನಲ್ಲಿಯೇ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಧಾನಿ ಮೋದಿಗೆ ಮೊದಲ ಸ್ಥಾನ . ಮೋದಿ ಸಹಿಸದೇ ಕೆಲವರು ನಡೆಸುತ್ತಿರುವ ಕುತಂತ್ರ ಇದು. ಹೇಡಿಗಳ ಬಗ್ಗೆ ಭಯಭೀತರಾಗುವ ಪ್ರಶ್ನೆ ಇಲ್ಲ. ಇದಕ್ಕೆ ಬಲಿಯಾಗಲು ಸಾಧ್ಯವಿಲ್ಲ. ದೇಶಪ್ರೇಮ ಎಂದರೆ ಮೋದಿ ಎಂಬ ಭಾವನೆ ನಮ್ಮಲ್ಲಿ ಬಂದಿದೆ. ಈ ಷಡ್ಯಂತ್ರಕ್ಕೆ ಬಲಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...