alex Certify BIG NEWS: ಇಂಗ್ಲೀಷ್ ಹಾಗೂ ಸೋನಿಯಾ ಗಾಂಧಿ ಗುಲಾಮ ಎಂದು ಘೋಷಣೆ ಮಾಡಿಕೊಳ್ಳಿ; ಸಿದ್ದರಾಮಯ್ಯಗೆ ಸಿ.ಟಿ.ರವಿ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂಗ್ಲೀಷ್ ಹಾಗೂ ಸೋನಿಯಾ ಗಾಂಧಿ ಗುಲಾಮ ಎಂದು ಘೋಷಣೆ ಮಾಡಿಕೊಳ್ಳಿ; ಸಿದ್ದರಾಮಯ್ಯಗೆ ಸಿ.ಟಿ.ರವಿ ತಿರುಗೇಟು

ಬೆಂಗಳೂರು: ಬಿಜೆಪಿ ನಾಯಕರೇ ನೀವು ಅಮಿತ್ ಶಾ ಗುಲಾಮರಾಗಬೇಡಿ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ, ಸಿದ್ದರಾಮಯ್ಯ ತಾವು ಇಂಗ್ಲೀಷ್ ಹಾಗೂ ಸೋನಿಯಾ ಗಾಂಧಿ ಗುಲಾಮ ಎಂದು ಘೋಷಣೆ ಮಾಡಿಕೊಳ್ಳಲಿ ಎಂದು ಕಿಡಿಕಾರಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಮೊದಲು ತಾವು ಗುಲಾಮರು ಎಂಬುದನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳಲಿ ಬಳಿಕ ಬಿಜೆಪಿ ಬಗ್ಗೆ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು.

BIG NEWS: ಪಾಕ್ ನಲ್ಲಿ 10 ದಿನಗಳಲ್ಲಿ 2 ಪೋಲಿಯೋ ಪ್ರಕರಣ ಪತ್ತೆ

ಸಿದ್ದರಾಮಯ್ಯನವರು ನಮ್ಮ ದೇಶದಲ್ಲಿರುವ ಭಾಷೆ ಒಪ್ಪಿಕೊಳ್ಳುತ್ತಾರೋ ಅಥವಾ ಆಕ್ರಮಣ ಮಾಡಿ ಹೇರಿದ ಗುಲಾಮಗಿರಿಯ ಭಾಷೆಗೆ ಆದ್ಯತೆ ಕೊಡುತ್ತಾರೋ? ಕರ್ನಾಟಕದಲ್ಲಿ ಕನ್ನಡವೇ ಶ್ರೇಷ್ಠ. ನಾವು ಎಂದಿಗೂ ಗುಲಾಮರಾಗುವುದಿಲ್ಲ. ಅಮಿತ್ ಶಾ ಅವರು ಹೇಳಿದ್ದು ಮಾತೃಭಾಷೆಗೆ ಮನ್ನಣೆ ನೀಡಿ. ಸಂಪರ್ಕ ಭಾಷೆಯಾಗಿ ಇಂಗ್ಲೀಷ್ ಬದಲಿಗೆ ಹಿಂದಿ ಬಳಸಿ ಎಂದು. ಒಂದು ವೇಳೆ ಕನ್ನಡ ಭಾಷೆ ಬಿಡಲು ಅಮಿತ್ ಶಾ ಹೇಳಿದ್ದರೆ ನಾವೆಲ್ಲರೂ ಧ್ವನಿ ಎತ್ತುತ್ತಿದ್ದೆವು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...