![](https://kannadadunia.com/wp-content/uploads/2022/11/fire-breaks-out-in-parcel-van-of-mumbai-bound-shalimar-express-passengers-safe.jpg)
ಬೀದರ್: ಬೀದರ್ ನ ಜೆಸ್ಕಾಂ ಕಚೇರಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಕಚೇರಿಯಲ್ಲಿರುವ ಪೀಠೋಪಕರಣ, ಟಿಸಿಗಳು ಬೆಂಕಿಗಾಹುತಿಯಾಗಿವೆ.
ಬೀದರ್ ನಗರದ ಜ್ಯೋತಿ ಕಾಲೋನಿಯಲ್ಲಿರುವ ಜೆಸ್ಕಾಂ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದಾಗಿ ಘಟನೆ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನ ಸಿಬ್ಬಂದಿ, ಪೊಲೀಸರು ದೌಡಾಯಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.