alex Certify ಬ್ರಾಹ್ಮಣ ಸಮುದಾಯಕ್ಕೆ ಅಪಮಾನ; ಛತ್ತೀಸ್ ಗಢ ಸಿಎಂ ತಂದೆ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಾಹ್ಮಣ ಸಮುದಾಯಕ್ಕೆ ಅಪಮಾನ; ಛತ್ತೀಸ್ ಗಢ ಸಿಎಂ ತಂದೆ ಅರೆಸ್ಟ್

ಒಂದು ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಅಡಿಯಲ್ಲಿ ಛತ್ತೀಸಗಢ ಸಿಎಂ ಭೂಪೇಶ್​​ ಬಘೇಲ್​ ತಂದೆ ನಂದಕುಮಾರ್​ ಬಘೇಲ್​ರನ್ನ ಪೊಲೀಸರು ಬಂಧಿಸಿದ್ದಾರೆ.

ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪವನ್ನು ನಂದಕುಮಾರ್​ ಎದುರಿಸುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಛತ್ತೀಸಗಢ ಸಿಎಂ ಭೂಪೇಶ್​ ಬಘೇಲ್​ ಸಮುದಾಯದ ಬಗ್ಗೆ ಈ ರೀತಿ ಹೇಳಿಕೆ ನೀಡಿರೋದು ನೋವುಂಟು ಮಾಡಿದೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದ್ರು. ರಾಜ್ಪುರ ಕೋರ್ಟ್​ ನಂದ ಕುಮಾರ್​ರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿದೆ.

ಡಿಡಿ ನಗರ ಪೊಲೀಸ್​ ಠಾಣೆಯಲ್ಲಿ ನಂದಕುಮಾರ್ ವಿರುದ್ಧ ಸರ್ವ ಬ್ರಾಹ್ಮಣ ಸಮಾಜ ದೂರನ್ನು ದಾಖಲಿಸಿತ್ತು. ಈ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡ ಪೊಲೀಸರು ನಂದಕುಮಾರ್​ ಬಘೇಲ್​(86)ರನ್ನು ಬಂಧಿಸಿದ್ದಾರೆ. ನಂದಕುಮಾರ್​ ವಿರುದ್ಧ ರ್ಯಾಲಿ ನಡೆಸಿದ್ದ ಬ್ರಾಹ್ಮಣ ಸಮಾಜ ಅವರನ್ನು ಬಂಧಿಸುವಂತೆ ಆಗ್ರಹಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...