alex Certify ಇಲ್ಲಿದೆ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಭೀಕರ ಅಪಘಾತ ಕುರಿತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ನಡೆದ ಭೀಕರ ಅಪಘಾತ ಕುರಿತ ಮಾಹಿತಿ

ರಾಜಧಾನಿ ಬೆಂಗಳೂರಿನ ಕೋರಮಂಗಲದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಡಿಎಂಕೆ ಶಾಸಕ ವೈ , ಪ್ರಕಾಶ್​ ಪುತ್ರ ಕರುಣಾ ಸಾಗರ್,​ ಭಾವಿ ಸೊಸೆ ಬಿಂದು ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ.

ಅತಿವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗ್ತಿದೆ. ಒಂದೇ ಪಿಜಿಯಲ್ಲಿ ವಾಸವಿದ್ದ ಈ 7 ಮಂದಿ ರಾತ್ರಿ ಪಾರ್ಟಿ ಮುಗಿಸಿ ರ್ಯಾಶ್​ ಡ್ರೈವಿಂಗ್​ ಮಾಡುತ್ತಿದ್ದರು ಎನ್ನಲಾಗಿದೆ.

ಆದರೆ ತಿರುವಿನಲ್ಲಿ ಆಡಿ ಕ್ಯೂ 3 ಕಾರು ನಿಯಂತ್ರಣಕ್ಕೆ ಸಿಗದ ಪರಿಣಾಮ ಡಿವೈಡರ್​ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 7 ಮಂದಿಯೂ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಪಘಾತದಲ್ಲಿ ಮೃತಪಟ್ಟ ಬಿಂದು, ಕರುಣಾಸಾಗರ್​ ಸ್ವಂತ ಮಾವನ ಮಗಳು. ಕರುಣಾ ಸಾಗರ್​ ಜೊತೆಯಲ್ಲಿ ಇದ್ದವರೆಲ್ಲ ಅವರ ಸ್ನೇಹಿತರು ಎನ್ನಲಾಗಿದೆ. ಆದರೆ ಇವರೆಲ್ಲ ಯಾರು ಎಂಬ ಪರಿಚಯ ಕರುಣಾ ಸಾಗರ್​ ಕುಟುಂಬಸ್ಥರಿಗೆ ಇಲ್ಲ. ಪ್ರತ್ಯಕ್ಷದರ್ಶಿ ಸತೀಶ್​ ಎಂಬವರು ಅಪಘಾತ ಸಂಬಂಧ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಅಪಘಾತ ನಡೆದ ವೇಳೆ ಸತೀಶ್​ ರಸ್ತೆ ಬದಿ ಕಾರು ಪಾರ್ಕ್​ ಮಾಡಿ ನಿದ್ದೆಗೆ ಜಾರಿದ್ದರು. ಓಲಾ ಕ್ಯಾಬ್​ ಓಡಿಸುತ್ತಿದ್ದ ಸತೀಶ್​ ಜೋರಾದ ಶಬ್ದ ಕೇಳಿ ಎಚ್ಚೆತ್ತಿದ್ದಾರೆ. ಅಪಘಾತದ ಭೀಕರತೆಗೆ ಕಾರು ದಟ್ಟ ಹೊಗೆಯಿಂದ ಆವರಿಸಿತ್ತು. ಕೂಡಲೇ ಸತೀಶ್​ ಸೇರಿದಂತೆ ಹಲವರು ಕಾರಿನತ್ತ ಧಾವಿಸಿದ್ದರು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟೈರ್​ಗಳೇ ಕಳಚಿಬಿದ್ದಿದ್ದವು.  ಸತೀಶ್​ ಕೂಡಲೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಈ ವೇಳೆಗಾಗಲೇ ಕಾರಿನಲ್ಲಿದ್ದ ಆರು ಮಂದಿ ಸಾವನ್ನಪ್ಪಿದ್ದರು. ಓರ್ವನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆತ ಕೂಡ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಆಡುಗೋಡಿ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ಮೃತ ಕರುಣಾ ಸಾಗರ್​ ಮೆಡಿಸಿನ್​​ ಪಡೆಯಲು ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಸ್ನೇಹಿತ ಉತ್ಸವ್​ ಜೊತೆ ಬಂದಿದ್ದ. ಉಳಿದ ಐವರು ಕರುಣಾ ಸಾಗರ್​ ಪಿಜಿ ಸ್ನೇಹಿತರು. ಮೃತ ಬಿಂದು ಹಾಗೂ ಕರುಣಾ ಸಾಗರ್​ ಮದುವೆ ಕೂಡ ನಿಶ್ಚಯವಾಗಿತ್ತು. ಇವರೆಲ್ಲ ಆ ರಾತ್ರಿ ಕಾರಿನಲ್ಲಿ ಎಲ್ಲಿಗೆ ಹೊರಟಿದ್ದರು ಎಂಬ ಮಾಹಿತಿ ಮಾತ್ರ ಇನ್ನೂ ನಿಗೂಢವಾಗಿದೆ.

ಮೃತ ಕರುಣಾ ಸಾಗರ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಬೈಕ್​ ರೇಸಿಂಗ್​ ಬಗ್ಗೆ ಕ್ರೇಜ್​ ಹೊಂದಿದ್ದ ಸಾಗರ್​ಗೆ ಅತಿ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮೃತರ ಶವವನ್ನು ಸೇಂಟ್​ ಜಾನ್ಸ್​ ಆಸ್ಪತ್ರೆಯಲ್ಲಿ ಇಡಲಾಗಿದೆ.

ಕಾರಿನಲ್ಲಿ ಒಟ್ಟು 7 ಮಂದಿಯಿದ್ದು ಇದರಲ್ಲಿ ನಾಲ್ವರು ಯುವಕರು ಹಾಗೂ ಮೂವರು ಯುವತಿಯರಿದ್ದರು ಎನ್ನಲಾಗಿದೆ. ಕಾರಿನಲ್ಲಿದ್ದ ಯಾರೂ ಸೀಟ್​ ಬೆಲ್ಟ್​ ಧರಿಸಿರಲಿಲ್ಲ.

ಇನ್ನು ಮೃತ ಬಿಂದು ಬೆಂಗಳೂರಿಗೆ ಬಂದಿದ್ದೇ ನಮಗೆ ತಿಳಿದಿರಲಿಲ್ಲ ಎಂದು ಬಿಂದು ತಂದೆ ಚಂದ್ರಶೇಖರ್​ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಬಿಂದು – ಕರುಣಾ ಮದುವೆ ಮಾತುಕತೆ ನಡೆದಿತ್ತು. ಸಾಗರ್​ನನ್ನೇ ಮದುವೆ ಆಗೋದಾಗಿ ಬಿಂದು ಹೇಳಿದ್ದಳು. ಆಕೆ ರಾತ್ರಿ 8 ಗಂಟೆಗೆ ಫೋನ್​ ಮಾಡಿದ್ದಳು. ಚೆನ್ನೈಗೆ ಹೋಗುತ್ತಿರೋದಾಗಿ ನಮಗೆ ಮಾಹಿತಿ ನೀಡಿದ್ದಳು. ಆದರೆ ಆಗಲೂ ಕೂಡ ಆಕೆ ಬೆಂಗಳೂರಿನಲ್ಲಿದ್ದ ವಿಚಾರ ನಮಗೆ ತಿಳಿದೇ ಇರಲಿಲ್ಲ ಎಂದು ತಂದೆ ಹೇಳಿದ್ದಾರೆ.

ಕರುಣಾ ಸಾಗರ್​ ಮೃತದೇಹದ ಪೋಸ್ಟ್​ ಮಾರ್ಟಂ ಅಂತ್ಯವಾಗಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ರವಾನೆ ಮಾಡಿದ ಬಳಿಕ ಹೊಸೂರಿನಲ್ಲಿ ಅಂತ್ಯಕ್ರಿಯೆ ನಡೆಸೋದಾಗಿ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...