alex Certify ತಂದೆಯಿಂದ ಹಣ ಪೀಕಲು ಮಾಡಬಾರದ ಕೆಲಸ ಮಾಡಿದ ಮಗ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆಯಿಂದ ಹಣ ಪೀಕಲು ಮಾಡಬಾರದ ಕೆಲಸ ಮಾಡಿದ ಮಗ..!

20 ವರ್ಷದ ಯುವಕನೊಬ್ಬ ತಂದೆಯಿಂದ ಹಣ ಪೀಕುವ ಸಲುವಾಗಿ ತನ್ನನ್ನು ಕಿಡ್ನಾಪ್​ ಮಾಡಿದ್ದಾರೆ ಎಂದು ಸುಳ್ಳು ನಾಟಕವಾಡಿದ ಶಾಕಿಂಗ್​ ಘಟನೆಯೊಂದು ಬೆಂಗಳೂರಿನ ಕುರುಬರಹಳ್ಳಿಯ ಮಹಾಲಕ್ಷ್ಮೀಪುರಂನಲ್ಲಿ ಸಂಭವಿದೆ.

ಸ್ಮಾರ್ಟ್ ಫೋನ್​ ಹಾಗೂ ಬ್ರ್ಯಾಂಡೆಡ್​ ಬಟ್ಟೆಗಳನ್ನು ಖರೀದಿಸುವ ಸಲುವಾಗಿ ಯುವಕ 3 ಲಕ್ಷ ರೂಪಾಯಿ ಸಾಲ ಮಾಡಿದ್ದನು.

20 ವರ್ಷದ ಯುವಕನನ್ನು ಮಖ್ತುಮ್​ ಸಾಬ್​ ಎಂದು ಗುರುತಿಸಲಾಗಿದೆ. ಮಹಾಲಕ್ಷ್ಮೀಪುರಂನ ನಿವಾಸಿಯಾಗಿದ್ದ ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

ಈ ಯುವಕ ತನ್ನ ಗರ್ಲ್​ಫ್ರೆಂಡ್​ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದ. ಆದರೆ ಆಕೆ ಆಗಸ್ಟ್​ ತಿಂಗಳಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಳು.

ಸ್ಮಾರ್ಟ್​ ಫೋನ್​ ಹಾಗೂ ಬ್ರ್ಯಾಂಡೆಡ್​ ಬಟ್ಟೆಗಳ ಖರೀದಿಗಾಗಿ ತಾನು ಹಣವನ್ನು ಖರ್ಚು ಮಾಡಿದ್ದಾಗಿ ಮಖ್ತುಮ್​ ಪೊಲೀಸರ ಎದುರು ಹೇಳಿದ್ದಾನೆ. ಸೆಪ್ಟೆಂಬರ್​ 13ರಂದು ಮಖ್ತುಮ್​ ತಂದೆ ಪೊಲೀಸ್​ ಠಾಣೆಯಲ್ಲಿ ದೂರನ್ನು ನೀಡಿದ್ದರು. ಅಪಹರಣಕಾರರು ತಮ್ಮ ಮಗನನ್ನು ಕಿಡ್ನಾಪ್​ ಮಾಡಿದ್ದು 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಿದ್ದರು. ಅಲ್ಲದೇ ದೂರಿನಲ್ಲಿ ತಮ್ಮ ಪುತ್ರ ಸೆಪ್ಟೆಂಬರ್​ 12ರಂದು ಮನೆಬಿಟ್ಟಿದ್ದು ಈತನ ಮೊಬೈಲ್​ ಸ್ವಿಚ್​ ಆಫ್​ ಆಗಿದೆ ಎಂದು ಉಲ್ಲೇಖಿಸಿದ್ದರು.

ತಮ್ಮ ಪುತ್ರನನ್ನು 5-6 ಮಂದಿ ಸೇರಿ ಅಪಹರಣ ಮಾಡಿದ್ದು 5 ಲಕ್ಷ ರೂಪಾಯಿಗೆ ಬೇಡಿಕೆಯೊಡ್ಡಿ ವಾಯ್ಸ್​ ಮೆಸೇಜ್​ ಕಳುಹಿಸಿದ್ದಾರೆ ಎಂದು ತಂದೆ ಪೊಲೀಸರಿಗೆ ಹೇಳಿದ್ದರು. ಡಿಜಿಟಲ್​ ಪೇಮೆಂಟ್​ ಮೂಲಕ ಹಣ ನೀಡುವಂತೆ ಅಪಹರಣಕಾರರು ಹೇಳಿದ್ದರು ಎನ್ನಲಾಗಿದೆ.

ಈ ಪ್ರಕರಣದ ಸಂಬಂಧ ಮಾಹಿತಿ ನೀಡಿದ ಪೊಲೀಸ್ ಉಪ ಕಮಿಷನರ್​ ಧರ್ಮೇಂದರ್​ ಕುಮಾರ್ ಮೀನಾ, ಯುವಕನು ತಿರುಪತಿ ತಲುಪಿದ್ದ. ತಾನೇ ಡ್ರೈವ್​ ಮಾಡಿಕೊಂಡು ಕಾರಿನಲ್ಲಿ ಇಲ್ಲಿಯವರೆಗೆ ಬಂದಿದ್ದ. ಆಗಲೇ ನಮಗೆ ಈ ಪ್ರಕರಣದಲ್ಲಿ ಬೇರೇನೋ ಇದೆ ಎಂಬ ಅನುಮಾನ ಮೂಡಿತ್ತು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...