alex Certify ʼಫೇಸ್ ​ಬುಕ್ʼ​ ಬಳಸುವ ಮುನ್ನ ಇರಲಿ ಈ ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಫೇಸ್ ​ಬುಕ್ʼ​ ಬಳಸುವ ಮುನ್ನ ಇರಲಿ ಈ ಎಚ್ಚರ

ಫೇಸ್​ಬುಕ್​​ನಲ್ಲಿ ಪರಿಚಯವಾದ ವ್ಯಕ್ತಿಯ ಪ್ರೇಮಪಾಶಕ್ಕೆ ಬಿದ್ದ ಗೃಹಿಣಿಯೊಬ್ಬಳು ಆತನಿಂದ ಕಿಡ್ನಾಪ್​​ ಆದ ಶಾಕಿಂಗ್​ ಘಟನೆಯೊಂದು ಪಶ್ಚಿಮ ಬಂಗಾಳದ ಬಿರ್​ಭಮ್​​ ಎಂಬಲ್ಲಿ ನಡೆದಿದೆ. ಆಕೆಯನ್ನ ಗುಜರಾತ್​ಗೆ ಕರೆದೊಯ್ದ ಅಪಹರಣಕಾರ ಆಕೆಯ ಕುಟುಂಬಕ್ಕೆ ಬೆದರಿಕೆ ಕರೆ ಮಾಡಿದ್ದಾನೆ. ಪೊಲೀಸರು ಕೊನೆಗೂ ಆತನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಲ್ಹಾತಿ ನಿವಾಸಿಯಾದ ಮಹಿಳೆಯು 2019ರಲ್ಲಿ ವಿವಾಹವಾಗಿದ್ದು, ಪತಿಯ ಮನೆಯಲ್ಲಿಯೇ ವಾಸವಿದ್ದಳು. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್​ ಇದ್ದ ಈಕೆ ಫೇಸ್​ಬುಕ್​​ನಲ್ಲಿ ರಾಕೇಶ್​ ಕುಮಾರ್​ ಪಾಂಡೆಯನ್ನ ಪರಿಚಯ ಮಾಡಿಕೊಂಡಿದ್ದಳು. ಇವರಿಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕೊನೆಗೆ ಈಕೆ ಮೇ 23ರಂದು ಪ್ರಿಯಕರನ ಜೊತೆ ಓಡಿಹೋಗಿದ್ದಳು.

ಪತ್ನಿ ಕಾಣೆಯಾದ ಹಿನ್ನೆಲೆ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇದಾಗಿ ಕೆಲವೇ ದಿನಗಳ ಬಳಿಕ ಕರೆ ಮಾಡಿದ ಅಪಹರಣಕಾರ ಮಹಿಳೆಯ ಕುಟುಂಬಸ್ಥರ ಬಳಿ 6 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಹಣ ನೀಡದೇ ಹೋದಲ್ಲಿ ಆಕೆಯನ್ನ ಮಾರಾಟ ಮಾಡೋದಾಗಿ ಬೆದರಿಕೆಯನ್ನೂ ಒಡ್ಡಿದ್ದ ಎನ್ನಲಾಗಿದೆ.

ಈ ಕರೆಯ ಬಗ್ಗೆ ಮಹಿಳೆಯ ತಂದೆ ಪೊಲೀಸ್​ ಠಾಣೆಗೆ ಸಂಪೂರ್ಣ ಮಾಹಿತಿ ನೀಡಿದ್ದರು. ಈ ಫೋನ್​ನ್ನು ಟ್ರೇಸ್​ ಮಾಡಿದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...