alex Certify ಪದೇ ಪದೇ ‘ದೃಶ್ಯಂ’ ಸಿನಿಮಾ ಸೀನ್ ನೋಡಿ ಪುತ್ರಿಯ ಪ್ರಿಯಕರನೊಂದಿಗೆ ಸೇರಿ ಪತಿ ಉಸಿರು ನಿಲ್ಲಿಸಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪದೇ ಪದೇ ‘ದೃಶ್ಯಂ’ ಸಿನಿಮಾ ಸೀನ್ ನೋಡಿ ಪುತ್ರಿಯ ಪ್ರಿಯಕರನೊಂದಿಗೆ ಸೇರಿ ಪತಿ ಉಸಿರು ನಿಲ್ಲಿಸಿದ ಪತ್ನಿ

ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪ್ರದೇಶದ ನಿವಾಸಿ ಸುಧೀರ್ ಕಾಂಬಳೆ(57) ಕೊಲೆ ಆರೋಪದ ಮೇಲೆ ಆತನ ಪತ್ನಿ, ಪುತ್ರಿ ಮತ್ತು ಪುತ್ರಿಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಸುಧೀರ್ ಪತ್ನಿ ರೋಹಿಣಿ, ಪುತ್ರಿ ಸ್ನೇಹಾ, ಸ್ನೇಹಾ ಪ್ರಿಯಕರ ಪುಣೆಯ ಅಕ್ಷಯ್ ಬಂಧಿತ ಆರೋಪಿಗಳು. ಸೆಪ್ಟೆಂಬರ್ 16 ರಂದು ಸುಧೀರ್ ಮನೆಯಲ್ಲೇ ಕೊಲೆಯಾಗಿದ್ದು, ಕ್ಯಾಂಪ್ ಠಾಣೆ ಪೊಲೀಸರು ಮನೆಯಲ್ಲಿಯೇ ಕೊಲೆಯಾದ ಮಾಹಿತಿ ತಿಳಿದು ಪರಿಶೀಲನೆ ನಡೆಸಿದ್ದರು .

ನೆಯವರನ್ನು ವಿಚಾರಣೆಗೆ ಒಳಪಡಿಸಿದಾಗ ತಮಗೆ ಗೊತ್ತಿಲ್ಲವೆಂದು ಹೇಳಿದ್ದರು. ತನಿಖೆಗಿಳಿದ ಪೊಲೀಸರಿಗೆ ಅಚ್ಚರಿಯ ಮಾಹಿತಿ ಗೊತ್ತಾಗಿದೆ. ಮೃತನ ಮಗಳ ಪ್ರಿಯಕರ ಅಕ್ಷಯನೇ ಸುಧೀರ್ ನನ್ನು ಕೊಲೆ ಮಾಡಿದ್ದು, ಆತನಿಗೆ ಪುತ್ರಿ ಸ್ನೇಹಾ ಮತ್ತು ಪತ್ನಿ ರೋಹಿಣಿ ಕೂಡ ಸಾಥ್ ನೀಡಿರುವುದು ಗೊತ್ತಾಗಿದೆ.

ಓದಲು ಪುಣೆಗೆ ಹೋಗಿದ್ದ ಸ್ನೇಹಾ ಬೇರೆ ಅಕ್ಷಯ್ ಪ್ರೀತಿಸಿದ್ದು, ಈ ವಿಚಾರ ತಿಳಿದು ಸುಧೀರ್ ಮಗಳಿಗೆ ಬೈದು ಬುದ್ಧಿ ಹೇಳಿದ್ದ. ಪತ್ನಿಗೂ ಬೈದಾಡಿದ್ದ. ಇದರಿಂದ ಇಬ್ಬರೂ ಸೇರಿಕೊಂಡು ‘ದೃಶ್ಯಂ’ ಸಿನಿಮಾ ನೋಡಿ ಕೊಲೆಗೆ ಸಂಚು ರೂಪಿಸಿದ್ದಾರೆ.

ಪುಣೆಯಿಂದ ಪ್ರಿಯಕರ ಅಕ್ಷಯ್ ನನ್ನು ಕರೆಸಿಕೊಂಡ ಸ್ನೇಹಾ ಕೊಲೆ ಮಾಡಿಸಿದ್ದಾಳೆ. ಸೆ. 15 ರಂದು ಪುಣೆಯಿಂದ ಬಂದ ಅಕ್ಷಯ್ ಬೆಳಗಾವಿ ಹೊರವಲಯದಲ್ಲಿ ರೋಹಿಣಿಯೊಂದಿಗೆ ಮಾತುಕತೆ ನಡೆಸಿದ್ದಾನೆ. ನಂತರ ‘ದೃಶ್ಯಂ’ ಸಿನಿಮಾ ಸೀನ್ ಗಳನ್ನು ಮೊಬೈಲ್ ನಲ್ಲಿ ಪದೇ ಪದೇ ನೋಡಿ ಪೊಲೀಸರಿಗೆ ಯಾವ ರೀತಿ ಉತ್ತರಿಸಬೇಕು. ಅನುಮಾನ ಬರದಂತೆ ಯಾವ ರೀತಿ ಹೇಳಿಕೆ ನೀಡಬೇಕು ಮತ್ತು ವರ್ತಿಸಬೇಕು ಎಂಬುದನ್ನು ಸಿನಿಮಾ ನೋಡಿ ಫೈನಲ್ ಮಾಡಿಕೊಂಡಿದ್ದಾರೆ.

ಬೆಳಗಾವಿಗೆ ಬಂದು ಸುಧೀರ್ ಮನೆಯಿಂದ 1 ಕಿ.ಮೀ. ದೂರದ ಲಾಡ್ಜ್ ನಲ್ಲಿ ತಂಗಿದ್ದ ಅಕ್ಷಯ್ ಬೆಳಗಿನ ಜಾವ ಮೂರು ಗಂಟೆಗೆ ಸುಧೀರ್ ಮನೆಗೆ ಬಂದು ಹಿಂಬಾಗಿಲಿನ ಮೂಲಕ ಒಳಗೆ ಪ್ರವೇಶಿಸಿ ಮೊದಲ ಮಹಡಿಯಲ್ಲಿ ಮಲಗಿದ್ದ ಸುಧೀರ್ ನನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಸುಧೀರ್ ಪ್ರತಿರೋಧ ತೋರಿದ್ದರಿಂದ ಅಕ್ಷಯ್ ಬೆರಳಿಗೆ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಪೊಲೀಸರು ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ಫೋನ್ ಆಧರಿಸಿ ವಿವಿಧ  ಆಯಾಮಗಳಲ್ಲಿ ತನಿಖೆ ನಡೆಸಿ ಅಕ್ಷಯ್, ರೋಹಿಣಿ, ಸ್ನೇಹಾ ಅವರನ್ನು ವಿಚಾರಣೆ ನಡೆಸಿದಾಗ ಇವೆಲ್ಲ ಸಂಗತಿ ಬೆಳಕಿಗೆ ಬಂದಿವೆ. ಮೂವರನ್ನು ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...